ಬೆಳ್ತಂಗಡಿ ವಿಧಾಸಭಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಅವರು ಮಾ 24 ಭಾನುವಾರದಂದು ನೀಡಲಿದ್ದಾರೆ.
ಭೇಟಿ ನೀಡಲಿರುವ ಸ್ಥಳ ಮತ್ತು ಸಮಯದ ಮಾಹಿತಿ: ಬೆಳಗ್ಗೆ 07 ಗಂಟೆಗೆ ಶಾಸಕ ಹರೀಶ್ ಪೂಂಜ ಮನೆಗೆ ಭೇಟಿ, 8 ಗಂಟೆಗೆ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ, 8.15 ಗಂಟೆಗೆ ಹೊಸಂಗಡಿ ಪಡ್ಯಾರಬೆಟ್ಟು ಜೀವಂಧರ್ ಜೈನ್ ಮನೆ ಭೇಟಿ, 8.30 ಗಂಟೆಗೆ ಅಂಡಿಂಜೆ ವಿನಾಯಕ ಭಜನಾ ಮಂದಿರದಲ್ಲಿ ನಾರಾವಿ,ಅಳದಂಗಡಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ, 9.15 ಗಂಟೆ ಅಳದಂಗಡಿ ಅರಮನೆ ಭೇಟಿ,9.30 ಗಂಟೆಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಕುವೆಟ್ಟು ಕಣಿಯೂರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ,10.15 ಗಂಟೆಗೆ ಮಾಜಿ ಶಾಸಕ ಪ್ರಭಾಕರ ಬಂಗೇರ ಭೇಟಿ, ಬೆಳಿಗ್ಗೆ 10.45 ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ,11 ಗಂಟೆಗೆ ಲಾಯಿಲ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಸಂಗಮ ಸಭಾ ಭವನ, 11.15 ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ,11.30 ಬೆಳ್ತಂಗಡಿ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ,12 ಗಂಟೆಗೆ ಉಜಿರೆ ಶರತ್ ಕೃಷ್ಣ ಪಡುವೆಟ್ನಾಯ ಮನೆ ಭೇಟಿ,12.30 ಕ್ಕೆ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ,ಮಧ್ಯಾಹ್ನ 1.30 ಬಂಗಾಡಿ ಅರಮನೆಯ ಯಶೋಧರ ಬಳ್ಳಾಲ್ ಭೇಟಿ,2 ಗಂಟೆಗೆ ಮುಂಡಾಜೆ ಶಕ್ತಿ ಕೇಂದ್ರ ಅಧ್ಯಕ್ಷರ ಮನೆ ಭೇಟಿ, 2.30 ಕ್ಕೆ ಮೋಹನ್ ರಾವ್ ಕಲ್ಮಂಜ ಮನೆ ಭೇಟಿ,3 ಗಂಟೆಗೆ ನೇತ್ರಾವತಿ ಪ್ರಣವ್ ಸಭಾ ಭವನದಲ್ಲಿ ಧರ್ಮಸ್ಥಳ ಉಜಿರೆ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ,4.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ದರುಶನ,5 ಗಂಟೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ,5.30 ಧರ್ಮಸ್ಥಳ ಬೂತ್ ಅಧ್ಯಕ್ಷರ ಮನೆ ಭೇಟಿ,6 ಗಂಟೆ ಕನ್ಯಾಡಿ ರಾಮ ಮಂದಿರ ಹಾಗೂ ಸ್ವಾಮೀಜಿಯವರ ಭೇಟಿ,6.30 ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮನೆ ಭೇಟಿ,7 ಗಂಟೆಗೆ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರ ದರ್ಶನವನ್ನು ಪಡೆಯಲಿದ್ದಾರೆ.