- Advertisement -
- Advertisement -
ಮಂಗಳೂರು; ಮಹಾಶಿವರಾತ್ರಿ ಹಾಗೂ ವೀಕೆಂಡ್ ಜೊತೆಯಾಗಿ ಆಗಮಿಸಿದ್ದರಿಂದ ಕುಕ್ಕೆ ಸುಬ್ರಮಣ್ಯಕ್ಕೆ ಭಕ್ತರ ದಂಡೇ ಆಗಮಿಸಿತ್ತು. ಆದರ ದೇಗುಲಕ್ಕೆ ಬಂದ ಭಕ್ತರಿಗೆ ವಾಪಾಸ್ ತೆರಳಲು ಬಸ್ ಸೌಕರ್ಯವಿಲ್ಲದೇ ಪರದಾಡುವಂತಾಗಿತ್ತು.
ಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಆಧಿಕಾರಿಗಳ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದರು.ಬಸ್ ಗಳನ್ನು ತಡೆದು ಆಕ್ರೋಶ ಹೊರ ಹಾಕಿದ್ರು. ಹಾಸನ, ಬೆಂಗಳೂರು ಭಾಗಕ್ಕೆ ತೆರಳಬೇಕಿದ್ದ ನೂರಾರು ಭಕ್ತರು ಬಸ್ ಗಾಗಿ ಪರದಾಡಿದ್ರು. ಬಳಿಕ ಬಸ್ ಗಳನ್ನು ತಡೆದು ಹೆಚ್ಚುವರಿ ಬಸ್ ಒದಗಿಸಲು ಪ್ರಯಾಣಿಕರ ಆಗ್ರಹಿಸಿದರು.
- Advertisement -