- Advertisement -
- Advertisement -
ಸುಳ್ಯ: ಬಸ್ ನಿಲ್ಲಿಸುವ ಮೊದಲೇ ಬಸ್ ನಿಂದ ಮಹಿಳೆ ಬಸ್ ನಿಂದ ಇಳಿದ ಪರಿಣಾಮಮಹಿಳೆಯ ಕಾಲಿನ ಮೇಲೆ ಹಿಂಬದಿ ಟಯರ್ ಚಲಿಸಿ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ಸಮೀಪದ ಸೋಣಂಗೇರಿಯಲ್ಲಿ ನಡೆದಿದೆ.
ಸುಳ್ಯ ತಾಲೂಕು ದುಗಲಡ್ಕದ ಕೊಳಂಜಿಕೋಡಿಯ ಅಬ್ದುಲ್ಲ ಎಂಬವರವ ಪತ್ನಿ ಮೈಮುನಾ (60 ) ಗಾಯಗೊಂಡ ಮಹಿಳೆ.
ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ಟಿಸಿ ಬಸ್ ಚಾಲಕ ಸೋಣಂಗೇರಿಯಲ್ಲಿ ನಿಲ್ಲಿಸುತ್ತಿದ್ದಂತೆ ದುಗಲಡ್ಕದ ಮೈಮುನಾ ಎಂಬ ಮಹಿಳೆ ಕೆಳಗೆ ಇಳಿದರೆನ್ನಲಾಗಿದೆ. ಆದರೆ ಆ ವೇಳೆಗೆ ಬಸ್ ನಿಲ್ಲದ ಪರಿಣಾಮ ಬಸ್ ಹಿಂಬದಿ ಚಕ್ರ ಮಹಿಳೆಯ ಕಾಲಿನ ಮೇಲೆ ಚಲಿಸಿ ಗಂಭೀರ ಗಾಯಗೊಂಡಿದ್ದಾರೆ.
- Advertisement -