ತಿರುವನಂತಪುರಂ: ಪುಟ್ಟ ಬಾಲಕನೋರ್ವ ಅಂಗನವಾಡಿಯಲ್ಲಿ ನೀಡುವ ಉಪ್ಪಿಟ್ಟು ಬೇಡ ಇದರ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡಿ ಎಂಬ ಬೇಡಿಕೆನ್ನಿಟ್ಟಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಅಂಗವಾಗಿ ಕೇರಳ ಸರಕಾರ ಅಂಗನವಾಡಿ ಕೇಂದ್ರದ ಆಹಾರದ ಮೆನು ಬದಲಾವಣೆ ಮಾಡುವ ಯೋಚನೆಯನ್ನು ಮಾಡುತ್ತಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ವಿಡಿಯೋ ಶಂಕರ ಎಂಬ ಹೆಸರಿನ ಬಾಲಕನದಾಗಿದ್ದು, ತಾಯಿ ಬಿರಿಯಾನಿ ತಿನ್ನಿಸುವ ವೇಳೆ ಬಾಲಕ ನನಗೆ ಅಂಗನವಾಡಿಯಲ್ಲೂ ಬಿರಿಯಾನಿ ಜೊತೆಗೆ ಚಿಕನ್ ಫ್ರೈ ಬೇಕು ಎಂದು ಹೇಳಿಕೊಂಡಿದ್ದಾನೆ. ಇನ್ನು ತಾಯಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇಅಲ್ಲದೆ ಈ ವಿಡಿಯೋ ರಾಜ್ಯ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರಿಗೂ ತಲುಪಿದ್ದು, ಇದನ್ನು ನೋಡಿದ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
https://www.facebook.com/watch/?v=1327716005097521&t=0
ಸಚಿವೆ ವೀಣಾ ಜಾರ್ಜ್ ಅವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ಅಂಗನವಾಡಿಯ ಆಹಾರದಲ್ಲಿ ಕೆಲವೊಂದು ಬದಲಾವಣೆ ತರಲು ನಿರ್ಧರಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಹಾಲು, ಚುಕ್ಕಿ ನೀಡುವ ಯೋಜನೆ ಜಾರಿಯಲ್ಲಿದೆ ಇನ್ನೂ ಕೆಲವೊಂದು ಬದಲಾವಣೆ ತರಲು ಸರಕಾರ ಮುಂದಾಗಿದ್ದು ಶೀಘ್ರದಲ್ಲೇ ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.