Thursday, March 28, 2024
Homeತಾಜಾ ಸುದ್ದಿಕ್ಷುಲ್ಲಕ ಕಾರಣಕ್ಕೆ ರಕ್ತಪಾತ- ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮನನ್ನು ಇರಿದು ಕೊಂದ ಅಣ್ಣ

ಕ್ಷುಲ್ಲಕ ಕಾರಣಕ್ಕೆ ರಕ್ತಪಾತ- ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮನನ್ನು ಇರಿದು ಕೊಂದ ಅಣ್ಣ

spot_img
- Advertisement -
- Advertisement -

ರಾಜಸ್ಥಾನ:ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುವ ರಕ್ತಪಾತಗಳು ಹೆಚ್ಚಾಗುತ್ತಲೇ ಇವೆ.ಇಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೊಬೈಲ್​ ಡೇಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಇರಿದು ಕೊಲೆ ಮಾಡಿದ್ದಾನೆ.


ತಮ್ಮ ರಾಯ್ ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ಆತನನ್ನು ಮನೆಯ ಛಾವಣಿಗೆ ಕರೆದೊಯ್ದ ರಾಮನ್​ ಆತನ ಮೇಲೆ ಹರಿಹಾಯ್ದಿದ್ದಾನೆ. ಅಲ್ಲದೇ ಆತನ ಎದೆಗೆ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ರಾಮನ್​ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.


ಘಟನೆಯ ನಂತರ ಮನೆಯ ಛಾವಣಿ ಮೇಲೆ ರಕ್ತಸ್ರಾವ ನೋಡಿದ ಕುಟುಂಬಸ್ಥರು ವಿಷಯ ತಿಳಿದು ಸಹೋದರನನ್ನ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ತೀವ್ರ ರಕ್ತಸ್ರಾವ ದಿಂದ ಬದುಕುಳಿಯಲಿಲ್ಲ.ಆರೋಪಿ ರಾಮ್​ನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!