- Advertisement -
- Advertisement -
ರಾಜಸ್ಥಾನ:ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುವ ರಕ್ತಪಾತಗಳು ಹೆಚ್ಚಾಗುತ್ತಲೇ ಇವೆ.ಇಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೊಬೈಲ್ ಡೇಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಇರಿದು ಕೊಲೆ ಮಾಡಿದ್ದಾನೆ.
ತಮ್ಮ ರಾಯ್ ಮೊಬೈಲ್ ಡೇಟಾ ಖಾಲಿ ಮಾಡಿದ ಕಾರಣಕ್ಕೆ ಆತನನ್ನು ಮನೆಯ ಛಾವಣಿಗೆ ಕರೆದೊಯ್ದ ರಾಮನ್ ಆತನ ಮೇಲೆ ಹರಿಹಾಯ್ದಿದ್ದಾನೆ. ಅಲ್ಲದೇ ಆತನ ಎದೆಗೆ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ರಾಮನ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಘಟನೆಯ ನಂತರ ಮನೆಯ ಛಾವಣಿ ಮೇಲೆ ರಕ್ತಸ್ರಾವ ನೋಡಿದ ಕುಟುಂಬಸ್ಥರು ವಿಷಯ ತಿಳಿದು ಸಹೋದರನನ್ನ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ತೀವ್ರ ರಕ್ತಸ್ರಾವ ದಿಂದ ಬದುಕುಳಿಯಲಿಲ್ಲ.ಆರೋಪಿ ರಾಮ್ನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
- Advertisement -