- Advertisement -
- Advertisement -
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಿಂದ ಕಾಳಿಂಗ ಸರ್ಪವೊಂದು ಎಸ್ಕೇಪ್ ಆದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಜೈವಿಕ ಉದ್ಯಾನವನದಿಂದ ಹೊರ ಬಂದ ಕಾಳಿಂಗ ಸರ್ಪವು ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದೆ.ಬಳಿಕ ಸರ್ಪವನ್ನು ಸಿಬಂದಿ ಸಹಾಯದಿಂದ ಹಿಡಿದು ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ತಪ್ಪಿಸಿಕೊಳ್ಳುತ್ತಿದ್ದಂತೆ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆರೆ ಸಿಕ್ಕಿ ಬಳಿಕ ನಿಟ್ಟುಸಿರು ಬಿಡುವಂತಾಯಿತು.
- Advertisement -