Sunday, June 29, 2025
Homeಕರಾವಳಿಇಂದಲ್ಲಾ ನಾಳೆ ಬಿಜೆಪಿಯಿಂದ ದೇಶದಲ್ಲಿ ಸಮಾನ ನಾಗರಿಕತೆ ಜಾರಿ; ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಇಂದಲ್ಲಾ ನಾಳೆ ಬಿಜೆಪಿಯಿಂದ ದೇಶದಲ್ಲಿ ಸಮಾನ ನಾಗರಿಕತೆ ಜಾರಿ; ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

spot_img
- Advertisement -
- Advertisement -

ಕೊಪ್ಪಳ: ಇವತ್ತಲ್ಲಾ ನಾಳೆ ಬಿಜೆಪಿ ದೇಶದಲ್ಲಿ ಸಮಾನ ನಾಗರಿಕತೆಯನ್ನು ತಂದೇ ತರುತ್ತದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜಿಲ್ಲಾ ಬಿಜೆಪಿ‌ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 370ನೇ ವಿಧಿ ರದ್ದು ಆಯ್ತು, ಅಯೋಧ್ಯೆಯಲ್ಲಿ ರಾಮ‌ಮಂದಿರ ನಿರ್ಮಾಣವಾಯ್ತು.
ನಾವು ಇಂದಲ್ಲಾ ನಾಳೆ ಸಮಾನ ನಾಗರಿಕತೆ ತಂದೇ ತರುತ್ತೇವೆ ಎಂದು ಹೇಳಿದ್ದಾರೆ.

ವೈಚಾರಿಕವಾಗಿ ವಿರೋಧ ಇರುವಂತಹ ಕಾಂಗ್ರೆಸ್ ಮತ್ತು ಎಡಪಂಥೀಯರು ಬಿಜೆಪಿ‌ ಅಧಿಕಾರಕ್ಕೆ ಬಂದ ಮೇಲೆ ಏನೇನು ಆಯ್ತು ಅಂತಾ ಹೇಳುತ್ತಾರೆ ಎಂದು ಕಾರ್ಯಕಾರಿಣಿಯಲ್ಲಿ ಹೇಳಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಏನು ಹೇಳಿದೆಯೋ ಅದನ್ನು ಮಾಡಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!