- Advertisement -
- Advertisement -
ಬೆಂಗಳೂರು _ಬಿಜೆಪಿಯಲ್ಲಿ ಸಿಎಂ ಬದಲಾವಣೆ ಚರ್ಚೆ ಬಿರುಗಾಳಿಯಂತೆ ಎದ್ದಿದೆ. ಬಿಎಸ್ವೈ ಪರ ಹಾಗೂ ವಿರುದ್ಧ ಟೀಂಗಳು ಪರಸ್ಪರ ಟಾಂಗ್ ಕೊಟ್ಟಿಕೊಂಡು ಓಡಾಡ್ತಿದ್ದಾರೆ.. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡಿರೋದಾಗಿ ತಿಳಿಸಿದ್ದಾರೆ. ಈ ನಡುವೆ ಹೈಕಮಾಂಡ್ ಎಚ್ಚರಿಕೆ ನೀಡಿದ್ದು ಯಾರೊಬ್ಬರೂ ಹೇಳಿಕೆ ನೀಡದಂತೆ ತಿಳಿಸಿದ್ದಾರೆ. ಕಾರ್ಕಳ ಶಾಸಕ ವಿಧಾನಸಭೆ ಮುಖ್ಯಸಚೇತಕ ಸುನೀಲ್ ಕುಮಾರ್ ಇದೀಗ ಟ್ವೀಟರ್ ನಲ್ಲಿ ಪಕ್ಷದ ಬೆಳವಣಿಗೆ ಕುರಿತು ಬಾಂಬ್ ಸಿಡಿಸಿದ್ದಾರೆ..
ಈಗ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಒಳಿತಲ್ಲ. ಈ ಅಭಿಪ್ರಾಯಗಳೆ ಎಲ್ಲಾ ಶಾಸಕರ ಹಾಗೂ ಕರ್ಯಕರ್ತರ ಅಭಿಪ್ರಾಯ ಆಗಿರುವುದಿಲ್ಲ. ನಮ್ಮ ಅಭಿಪ್ರಾಯವನ್ನ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ವರಿಷ್ಠರು ನಮ್ಮ ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ..
- Advertisement -