ಬಂಟ್ವಾಳ: ಸುಮಾರು 17 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಸದಸ್ಯರಾಗಿದ್ದು ಯಾವುದೇ ಆಸೆ ಆಕಾಂಕ್ಷೆಗಳು ಇಲ್ಲದೆ ಸೇವೆ ಸಲ್ಲಿಸಿದ್ದಾರೆ. ಇದೀಗ ಮನೀರ್ ಅವರನ್ನು ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಿಯುತ್ತಿರುವುದರಿಂದ ಮನನೊಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇವರನ್ನು ಬಿಜೆಪಿಯ ಮೋಹನ್ ದಾಸ್ ಕಿನ್ಯ ಹಾಗು ಪಂಚಾಯತ್ ಅಧ್ಯಕ್ಷ ಸುರೇಶ ಆಳ್ವ ಬಿಜೆಪಿಗೆ ಸೇರಿಸಿದ್ದರು.
“ನಾನು ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಮುಸ್ಲಿಂ ಎಂಬ ಕಾರಣಕ್ಕೆ ತುಳಿಯುತ್ತಿದ್ದಾರೆ. ಬೇರೆ ಬೇರೆ ಪಕ್ಷದಲ್ಲಿ ಇದ್ದವರು ಈಗ ಬಿಜೆಪಿ ಸೇರಿ ನಾನು ಪಟ್ಟಾ ಬಿಜೆಪಿಗನೆಂದು ಪೋಸು ಕೊಟ್ಟು ದೊಡ್ಡ ಅಧಿಕಾರದ ಹುದ್ದೆಗಳನ್ನು ಪಡೆದು ವಿಜೃಂಭಿಸುತ್ತಿದ್ದಾರೆ. ಆದರೂ ಸಹ ನಾನು ಬೇರೆ ಪಕ್ಷಕ್ಕೆ ಹೋಗದೆ ಇಲ್ಲಿಯವರೆಗೆ ಬಿಜೆಪಿಯಲ್ಲೇ ಉಳಿದಿದ್ದೆ. ನಾನು ಮಾಡಿದ ಕೆಲಸಗಳನ್ನು ಕಣ್ಣಾರೆ ಕಂಡಿದ್ದರೂ ಸಹ ನನ್ನನ್ನು ಮೂಲೆ ಗುಂಪಾಗಿರಿಸಿದ್ದರಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.