Tuesday, May 7, 2024
Homeಕರಾವಳಿಬೆಳ್ತಂಗಡಿ : ಕುತೂಹಲ ಕೆರಳಿಸಲಿದೆ ಬೆಳ್ತಂಗಡಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ:ಬಿಜೆಪಿ ನಾಯಕರು ಸೇರಿ ಹಲವು ಗ್ರಾಮ...

ಬೆಳ್ತಂಗಡಿ : ಕುತೂಹಲ ಕೆರಳಿಸಲಿದೆ ಬೆಳ್ತಂಗಡಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ:ಬಿಜೆಪಿ ನಾಯಕರು ಸೇರಿ ಹಲವು ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆ..?

spot_img
- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾವು  ದಿನದಿಂದ ದಿನ ಹೆಚ್ಚಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ  ಅಭ್ಯರ್ಥಿಗಳ ಗೆಲುವಿಗಾಗಿ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ ಅದರಲ್ಲೂ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಈ ಕ್ಷೇತ್ರದಲ್ಲಿ ಈ ಬಾರಿ ಎರಡು ಪ್ರಮುಖ ಪಕ್ಷಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾಗಿವೆ.

ಹಾಲಿ ಶಾಸಕ ಹರೀಶ್ ಪೂಂಜ‌ ಒಂದೆಡೆಯಾದರೆ ಬೆಸ್ಟ್ ಫೌಂಡೇಷನ್ ಮೂಲಕ ಕಳೆದ ಎರಡು ವರ್ಷಗಳಿಂದ ತಾಲೂಕಿನಾದ್ಯಂತ ಸಂಚರಿಸಿ ವಿವಿಧ ಸೇವಾ ಯೋಜನೆಗಳ ಮೂಲಕ ಗುರುತಿಸಿಕೊಂಡಿರುವ  ರಕ್ಷಿತ್ ಶಿವರಾಂ ಇಬ್ಬರ ನಡುವೆ ನೇರ ಸ್ಪರ್ಧೆ ಇರಲಿದೆ ಎಂಬುವುದು ಕೆಲವರ‌ ಅಭಿಪ್ರಾಯವಾಗಿದೆ. ಈಗಾಗಲೇ   ತಾಲೂಕಿನಾದ್ಯಂತ  ಚುನಾವಣಾ ಪ್ರಚಾರ  ಎರಡೂ ಪಕ್ಷಗಳಿಂದ ಭರ್ಜರಿಯಾಗಿ ನಡೆಯುತ್ತಿದೆ.ಏ. 17 ಸೋಮವಾರ ಅಭ್ಯರ್ಥಿಗಳಾದ  ಹರೀಶ್ ಪೂಂಜ, ಹಾಗೂ ರಕ್ಷಿತ್ ಶಿವರಾಂ ತಮ್ಮ ಉಮೇದುದಾರಿಕೆ ಸಲ್ಲಿಸಲಿದ್ದಾರೆ. ನಾಳೆ ನಡೆಯುವ  ಈ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರು ಸೇರಿದಂತೆ  ಹಲವಾರೂ ಮಂದಿ  ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ಪಕ್ಷದಲ್ಲಿ ಅಸಾಮಾಧಾನಗೊಂಡು ಸುಮಾರು 30 ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಸೇರಲಿದ್ದಾರೆ  ಎಂಬ ಮಾಹಿತಿಯನ್ನು ಕಳೆದ ಪತ್ರಿಕಾಗೋಷ್ಠಿಯಲ್ಲಿ  ಮಾಜಿ ಶಾಸಕ ವಸಂತ ಬಂಗೇರ ನೀಡಿದ್ದಾರೆ.

ಅದಲ್ಲದೇ ಈ ಮಧ್ಯೆ ಕಳೆದ ಗ್ರಾಮ‌ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಬೆಂಬಲ ಇಲ್ಲದೇ ಪಕ್ಷೇತರ ಅಭ್ಯರ್ಥಿಗಳಾಗಿ  ಸ್ಪರ್ಧಿಸಿ ಗೆಲುವು ಸಾಧಿಸಿದ ಸದಸ್ಯರುಗಳನ್ನು ತಮ್ಮ ಪಕ್ಷಗಳಿಗೆ ಸೇರಿಸಲು ಪ್ರಯತ್ನಗಳು ಕಾಂಗ್ರೆಸ್ ಹಾಗೂ ಬಿಜೆಪಿ ಮಾಡುತ್ತಿವೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ. ಯಾರು ಯಾವ ಪಕ್ಷ ಸೇರಲಿದ್ದಾರೆ ಎಂಬುವುದು ನಾಳೆ ತಿಳಿಯಲಿದೆ.

- Advertisement -
spot_img

Latest News

error: Content is protected !!