- Advertisement -
- Advertisement -
ಬೆಂಗಳೂರು: ನಮ್ಮ ನಡೆ ವಿಜಯದ ಕಡೆಗೆ. 140 ಸೀಟ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಬೂಟಾಟಿಕೆ ಕಾರ್ಯಕ್ರಮ ಯಾರಿಗೂ ತಲುಪೋದಿಲ್ಲ. ಕಾಂಗ್ರೆಸ್ ನಾಮಾವಶೇಶ ಆಗಿದೆ. ನಾನು ಇಲ್ಲಿ ಪ್ರವಾಸ ಮಾಡುವ ಕಾಂಗ್ರೆಸ್ ನಾಯಕರಿಗೆ ಕೇಳ್ತೇನೆ – ಕಾಂಗ್ರೆಸ್ ಅಡ್ರೆಸ್ಸಿಗೇ ಇಲ್ಲ. ಒಂದೆರಡು ಕಡೆ ಅಧಿಕಾರದಲ್ಲಿ ಇದೀರಾ. ಇಂದು ಇಲ್ಲಿ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ! ಇದು ಹಾಸ್ಯಾಸ್ಪದ. ನಾನು ಅವರ ಹೆಸರನ್ನೂ ಹೇಳಲು ಬಯಸೋಲ್ಲ ಎಂದು ಯಡಿಯೂರಪ್ಪ ಅವರು ಕಾಂಗ್ರೆಸ್ ಯಾತ್ರೆ ಬಗ್ಗೆ ನೇರವಾಗಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ವಾಗ್ದಾಳಿ ನಡೆಸಿದರು.
ನಮ್ಮ ಮುಂದಿನ ಯಾತ್ರೆ ವಿಜಯ ಯಾತ್ರೆ. ನಮ್ಮನ್ನ ಕಟ್ಟಿ ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳ್ನ ಗೆಲ್ಲುವುದು ನಿಶ್ಚಿತ ಎಂದರು.
- Advertisement -