- Advertisement -
- Advertisement -
ಗುರುವಾಯನಕೆರೆ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಗುರುವಾಯನಕೆರೆ ಅಯ್ಯಪ್ಪ ಮಂದಿರದ ರಸ್ತೆಯ ಕಂಚಿಂಜೆ ಕೋಡಿಬೈಲು ಸಂಪರ್ಕ ರಸ್ತೆಯಲ್ಲಿ ಬದಿಯ ಗಿಡ ಗಂಟ್ಟಿಗಳನ್ನು ತೆಗೆಯುವ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.


ಈ ಸಮಾಜಮುಖಿ ಕಾರ್ಯದ ನೇತೃತ್ವವನ್ನು ಸಂಘದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಅವರು ವಹಿಸಿಕೊಂಡಿದ್ದರು. ಸಂಘದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಗೌರವಾಧ್ಯಕ್ಷ ಎನ್. ಎ. ಗೋಪಾಲ್ ಅಳದಂಗಡಿ ಹಾಗೂ ಪಧಾದಿಕಾರಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು.

- Advertisement -