- Advertisement -
- Advertisement -
ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿಯವರ 70 ನೇ ಜನ್ಮದಿನ ಇಂದು. ಈ ವಿಶೇಷ ಸಂದರ್ಭವನ್ನು ಬೆಳ್ತಂಗಡಿ ನಗರ ಬಿಜೆಪಿ ‘ವಿಶೇಷ’ ರೀತಿಯಲ್ಲಿ ಆಚರಿಸುತ್ತಿದೆ. ನಗರ ಬಿಜೆಪಿ ಸದಸ್ಯರಿಂದ ಹಾಗೂ ಕಾರ್ಯಕರ್ತರಿಂದ ಸೆ.17 ರಂದು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿ ಹಾಗೂ ಹೊರ ರೋಗಿ 70 ಮಂದಿಗೆ ಹಣ್ಣುಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲದ ಉಪಾಧ್ಯಕ್ಷ ಸೀತಾರಾಮ್ ಬೆಳಾಲು, ನಗರ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ, ಶರತ್ ಕುಮಾರ್ ಶೆಟ್ಟಿ, ಗೌರಿ, ರಜನಿ ಕುಡ್ವ, ತುಳಸಿ, ಲೊಕೇಶ್, ಬೆಳ್ತಂಗಡಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಕೇಶವ, ಬಿಜೆಪಿ ಕಾರ್ಯಕರ್ತರಾದ ವಿಶ್ವನಾಥ್, ಸಂತೋಷ್, ಕರುಣಾಕರ, ಆರೋಗ್ಯ ಸಮಿತಿ ಸದಸ್ಯರಾದ ರಾಜೇಶ್, ತುಕಾರಮ, ಡಾ.ಚಂದ್ರಕಾಂತ್, ಮೊದಲಾದವರು ಉಪಸ್ಥಿತರಿದ್ದರು.
- Advertisement -