ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ 8 ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಸುದೆಮುಗೇರು ತಿರುವಿನಿಂದ ಕಿಟ್ಟಣ್ಣ ಶೆಟ್ಟಿ ಮನೆಯವರೆಗೆ ರಸ್ತೆ ಕಾಂಕ್ರೀಟೀಕರಣಕ್ಕೆ 40 ಲಕ್ಷ ರೂ., ಮಟ್ಲ ಜೋಸೆಫ್ ಮನೆಯಿಂದ ಮಟ್ಲ ನಾರಾಯಣ ರಾವ್ ಮನೆವರೆಗೆ ರಸ್ತೆ ಕಾಂಕ್ರೀಟೀಕರಣ 35 ಲಕ್ಷ ರೂ., ಕೆಲ್ಲಗುತ್ತು ರಸ್ತೆಯಿಂದ ಚರ್ಚ್ ರಸ್ರೆ ಕಾಂಕ್ರೀಟೀಕರಣಕ್ಕೆ 25 ಲಕ್ಷ ರೂ., ಕೆಲ್ಲಗುತ್ತು ಮೆಡ್ಯಲೋಟ್ಟು ರಸ್ತೆ ಕಾಂಕ್ರೀಟೀಕರಣ ಕ್ಕೆ 50 ಲಕ್ಷ ರೂ., ಜೈನ ಪೇಟೆ ಅರಫಾ ಸ್ಯಾನಿಟರಿ ಪಕ್ಕದ ರಸ್ತೆ ಕಾಂಕ್ರೀಟೀಕರಣ ಹಾಗೂ ಹಳ್ಳಕ್ಕೆ ತಡೆಗೋಡೆ 30 ಲಕ್ಷ ರೂ., ಗುಂಪಲಾಜೆ ಕೃಷ್ಣ ಭಟ್ ಮನೆಯಿಂದ ಮುಗುಳಿ ಛತ್ರ ರಸ್ತೆ ಕಾಂಕ್ರೀಟೀಕರಣ 20 ಲಕ್ಷ ರೂ., ಕಂಚಿಂಜೆ ರುದ್ರೋಜಿಯವರ ಮನೆ ಎದುರು ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂ. ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಯಾನಂದ ಗೌಡ, ಶರತ್ ಕುಮಾರ್ ಶೆಟ್ಟಿ, ರಜನಿ ಕುಡ್ವ, ಅಂಬರೀಶ್, ಲೋಕೇಶ್, ಜಗದೀಶ್ ಡಿ, ತುಳಸಿ,ಗೌರಿ, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗಾ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು