- Advertisement -
- Advertisement -
ಬೆಂಗಳೂರು: ಕಳೆದ ವಾರ ಹಾಸನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟಿನ ಸಹೋದರರಿಬ್ಬರು ಸಾವನ್ನಪ್ಪಿರುವ ಕಹಿಘಟನೆ ಮಾಸುವ ಮುನ್ನವೇ ಇನ್ನೊಂದು ದುಃಖದ ಸುದ್ದಿ ಬೆಳ್ತಂಗಡಿ ತಾಲೂಕಿನ ಪಾಲಿಗಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟಿಪ್ಪರ್-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ಕೊಂಬೆಟ್ಟಿಮಾರು ನಿವಾಸಿ ವಿಶ್ವನಾಥ್ ನಾಯ್ಕ್ ಎಂಬವರ ಪುತ್ರ ನಿತೇಶ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ನಿತೇಶ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. 2ದಿನದ ಮೊದಲಷ್ಟೇ ಬೆಂಗಳೂರಿಗೆ ಮತ್ತೆ ವಾಪಾಸ್ಸಾಗಿದ್ದರು. ಘಟನೆಯಿಂದಾಗಿ ನಿತೇಶ್ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
- Advertisement -