Saturday, June 13, 2026
Homeಕರಾವಳಿಬೆಳ್ತಂಗಡಿ: ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ, ಮೌನವಾಗಿರುವ ನಗರ ಪಂಚಾಯತ್

ಬೆಳ್ತಂಗಡಿ: ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ, ಮೌನವಾಗಿರುವ ನಗರ ಪಂಚಾಯತ್

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಿನಿ ವಿಧಾನಸೌಧದ ಮುಂದಿರುವ ಚರಂಡಿ ಹಲವಾರು ರೋಗಗಳ ಗೂಡಾಗಿದ್ದು, ಪಟ್ಟಣ ಪಂಚಾಯತ್​ ಮಾತ್ರ ಕಂಡೂ ಕಾಣದಂತೆ ಸುಮ್ಮನಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಕಚೇರಿ ಕೆಲಸಕ್ಕಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸುವ ಜನ ಡೆಂಗ್ಯೂನಂತಹ ಮಾರಕ ರೋಗಗಳು ಹರಡುವ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಮೀಸಲಿರುವ ನಿರೀಕ್ಷಣಾ ಮಂದಿರ ಮತ್ತು ಮುಖ್ಯ ರಸ್ತೆಗೆ ಹೋಗಲು ಇದೇ ಮಾರ್ಗವನ್ನು ಬಳಸಬೇಕಾಗಿದ್ದು, ರಸ್ತೆ ಬದಿ ಇರುವ ಚರಂಡಿ ನೋಡಿದರೆ ಹೆದರಿ ಓಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯತ್ ಪ್ರತೀ ವರ್ಷ ಚರಂಡಿಗಳ ದುರಸ್ತಿಗಾಗಿ ಅದೇಷ್ಟೋ ಹಣ ಮೀಸಲಿಟ್ಟರೂ ಸಮಸ್ಯೆ ಮಾತ್ರ ಹಾಗೆಯೇ ಇದೆ. ಹೂಳು ತೆಗೆಯುವ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಕಳೆದ ವರ್ಷ ನಗರ ಪಂಚಾಯತ್ ವ್ಯಾಪ್ತಿಯ 11 ವಾರ್ಡ್​ಗಳ ಚರಂಡಿಗಳ ಹೊಳೆತ್ತುವ ಕಾಮಗಾರಿಗಾಗಿ ಲಕ್ಷಾಂತರ ರೂ. ಮೀಸಲಿಡಲಾಗಿತ್ತು.

ಹಣ ಖಾಲಿಯಾದರೂ ಹೂಳು ಮಾತ್ರ ಹಾಗಯೇ ಇದ್ದು, ಹಣ ದುರುಪಯೋಗದ ಆರೋಪ ಕೇಳಿ ಬರುತ್ತಿದೆ.ನಗರ ಸೌಂದರ್ಯಕ್ಕೆ ಹಾಗೂ ವಾಹನ ನಿಲುಗಡೆಗೆ ತೊಂದರೆ ಆಗುತ್ತೆ ಎಂದು ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸುವ ಅಧಿಕಾರಿಗಳಿಗೆ ಈ ಕೊಳಚೆ ಗುಂಡಿ ಮಾತ್ರ ಕಾಣದಿರುವುದು ದುರಂತ ಎನ್ನುತ್ತಾರೆ ಸಾರ್ವಜನಿಕರು.

- Advertisement -

Latest News

error: Content is protected !!