- Advertisement -
- Advertisement -
ಚಿಕ್ಕಮಗಳೂರು; ಶಾಲೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಬೆಳ್ತಂಗಡಿಯ ಯೂಟ್ಯೂಬರ್ ಸಿಕ್ಕಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿ ಕಟ್ಟೆ ಗ್ರಾಮದ ಶಾಲೆಯಲ್ಲಿ ನಡೆದಿದೆ. ಬೆಳ್ತಂಗಡಿ ಮೂಲದ ಶರತ್ ಸಿಕ್ಕಿಬಿದ್ದ ಯೂಟ್ಯೂಬರ್.
ಶರತ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿ ಕಟ್ಟೆ ಗ್ರಾಮದ ಸದ್ಗುರು ಪ್ರಾಥಮಿಕ ಶಾಲೆಗೆ ಶಾಲಾ ವಾರ್ಷಿಕೋತ್ಸವದ ವೀಡಿಯೋ ಮಾಡಲು ಬಂದಿದ್ದ. ವಾರ್ಷಿಕೋತ್ಸವದ ಬಳಿಕ ಕಳ್ಳತನ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಇನ್ನು ಈತ ಕತ್ತಿ ಸಮೇತ ಕಳ್ಳತನಕ್ಕೆ ಶಾಲೆಗೆ ನುಗ್ಗಿದ್ದ ಎನ್ನಲಾಗಿದೆ. ಕಳ್ಳತನಕ್ಕೆ ಯತ್ನಿಸಿದಾಗ ಶಾಲಾ ಸಿಬ್ಬಂದಿಗೆ ಸಿಕ್ಕಿಬಿದ್ದ ಶರತ್.ಯೂ ಟ್ಯೂಬರ್ ಶರತ್ ನನ್ನು ಜಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Advertisement -