Monday, May 6, 2024
Homeಕರಾವಳಿಬಂಟ್ವಾಳ: ಜ್ಯೋತಿಷಿಯೋರ್ವರಿಗೆ ಚೂರಿ ಇರಿದು ರಾಡ್ ನಿಂದ ಹಲ್ಲೆ ನಡೆಸಿ ಪರಾರಿಯಾದ ಅಪರಿಚಿತರು..!

ಬಂಟ್ವಾಳ: ಜ್ಯೋತಿಷಿಯೋರ್ವರಿಗೆ ಚೂರಿ ಇರಿದು ರಾಡ್ ನಿಂದ ಹಲ್ಲೆ ನಡೆಸಿ ಪರಾರಿಯಾದ ಅಪರಿಚಿತರು..!

spot_img
- Advertisement -
- Advertisement -

ಬಂಟ್ವಾಳ: ಜ್ಯೋತಿಷಿಯೋರ್ವರಿಗೆ ಇಬ್ಬರು ವ್ಯಕ್ತಿಗಳು ಚೂರಿ ಹಾಕಿ ಪರಾರಿಯಾದ ಘಟನೆ ಬಿಸಿರೋಡಿನ ಹೃದಯಭಾಗದಲ್ಲಿರುವ ಪದ್ಮಾ ಕಾಂಪ್ಲೆಕ್ಸನಲ್ಲಿ ನಡೆದಿದೆ.

ಜ್ಯೋತಿಷಿ ಪಂಡಿತ್ ಲಕ್ಮೀಕಾಂತ್ ಭಟ್ ಎಂಬವರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ಇಬ್ಬರು ವ್ಯಕ್ತಿಗಳು ವೈಯಕ್ತಿಕ ವಿಚಾರದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದು ಬಾಗಿಲು ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪಂಡಿತ್ ಅವರು ಘಟನೆಯ ಪರಿಣಾಮದಿಂದ ಮೂರ್ಚೆ ಹೋಗಿದ್ದು ಎಚ್ಚರ ಬಂದ ಬಳಿಕ ಅವರೇ ಎದ್ದು ರೂಮ್ ನಿಂದ ಹೊರಬಂದಿದ್ದಾರೆ. ರಕ್ತಸಿಕ್ತವಾದ ರೀತಿಯಲ್ಲಿ ಪಂಡಿತ್ ಅವರನ್ನು ಕಂಡು ಇವರ ಕೋಣೆಯ ಪಕ್ಕದ ಕೋಣೆಯವರು ನೋಡಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!