- Advertisement -
- Advertisement -
ಬೆಳ್ತಂಗಡಿ: ಹಿರಿಯ ಧಾರ್ಮಿಕ ಮುಂದಾಳು, ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಟ್ಟಾಜೆ ಸಚ್ಚಿದಾನಂದ ಭಟ್(75ವ) ರವರು ಇಂದು ಅಸೌಖ್ಯದಿಂದ ನಿಧನರಾದರು.
ಧಾರ್ಮಿಕ, ಸಹಕಾರಿ ಅಲ್ಲದೆ ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಜನಾನುರಾಗಿಯೂ ಕೊಡುಗೈದಾನಿಯಾಗಿದ್ದರು. ಮೃತರು ಪತ್ನಿ ಲೀಲಾ, ಪುತ್ರರಾದ ದಿಲ್ಲಿಯಲ್ಲಿ ಇಂಜಿನಿಯರ್ ಆಗಿರುವ ರಮೇಶ್, ಕೃಷಿಕ ದಿನೇಶ್, ಪುತ್ರಿ ವಸುಮತಿ, ಬಂಧು ಬಳಗದವರನ್ನು ಅಗಲಿದ್ದಾರೆ
- Advertisement -