ಬಂಟ್ವಾಳ: ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಂದಿರದ ಶಿಲಾನ್ಯಾಸ ದಿನದ ನೆನಪಿಗಾಗಿ ದ್ವೀಪ ಪ್ರಜ್ವಲನೆ ಹಾಗೂ ಅಂದು 1992ನೇ ಇಸವಿಯಲ್ಲಿ ರಾಮ ಮಂದಿರದ ಕರಸೇವೆಗೆ ನಮ್ಮ ಊರಿನಿಂದ ತೆರಳಿದ್ದ ಸ್ವಯಂಸೇವಕರಾದ ಸುಂದರ ಭಂಡಾರಿ ರಾಯಿ,ರಮೇಶ್ ಭಂಡಾರಿ ರಾಯಿ, ಸದಾನಂದ ಗೌಡ ರಾಯಿ ಇವರನ್ನು ಗುರುತಿಸಿ ಹಿಂ.ಜಾ.ವೇ.ಶಿವಾಜಿ ಶಾಖೆ ಕೊಯಿಲ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿಂ.ಜಾ.ವೇ. ಶಿವಾಜಿ ಶಾಖೆ ಘಟಕದ ಅಧ್ಯಕ್ಷರಾದ ಸಂತೇೂಷ್ ಜೆ.ಪಿ,ಹಿಂ.ಜಾ.ವೇ ಬಂಟ್ವಾಳ ಹಿಂದುಸಂಯೇೂಜಕರಾದ ಗಣೇಶ್ ಸುವರ್ಣನಾಡು, ಹಿಂ.ಜಾ.ವೇ.ರಾಯಿವಲಯದ ಅದ್ಯಕ್ಷರಾದ ಶಿವಾನಂದ ,ಉಪಾಧ್ಯಕ್ಷರಾದ ಮನೇೂಹರ ಕೈೂಲ, ಕಾರ್ಯದರ್ಶಿಯಾದ ಅಜಿತ್ ಹೇೂರಂಗಳ, ಘಟಕದ ಪದಾಧಿಕಾರಿಗಳಾದ ಶರತ್ ಕೈೂಲ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಊರಿನ ಹಿಂದೂ ಬಾಂಧವರು ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದರು.
ಕಾರ್ಯಕ್ರಮವನ್ನು ಹರ್ಷಿತ್ ಕೈೂಲ ನಿರುಾಪಿಸಿದರು,ಸಂತೇೂಷ್ ಕೈೂಲ ಸ್ವಾಗತಿಸಿದರು, ದಿನೇಶ್ ಕೈೂಲ ವಂದಿಸಿದರು.
