- Advertisement -
- Advertisement -
ಕುಪ್ಪೆಪದವು: ಬಜಪೆ ಪೇಟೆಯ ಹೋಟೆಲೊಂದರ ಮಾಲೀಕ ಯಶವಂತ್ ಶೆಟ್ಟಿ(49)ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಕಂದಾವರ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ವಿಶ್ವನಾಥ್ ಶೆಟ್ಟಿ ಅವರ ಸಹೋದರರಾಗಿರುವ ಯಶವಂತ್ ಅವರು ಬಜಪೆ ಪೇಟೆಯಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದು,ಆದಿತ್ಯವಾರ ಹೋಟೆಲ್ ಮುಚ್ಚಿದ್ದು ಯಶವಂತ್ ಅವರು ಸೋಮವಾರ ಮುಂಜಾನೆ ಮನೆಯಿಂದ ಹೊರಟವರು ಮೊಬೈಲ್ ಕರೆ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡು ಹೋಟೆಲ್ ಗೆ ಬಂದು ನೋಡಿದಾಗ ಹೋಟೆಲ್ ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ,
ಮೃತರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -