Friday, May 3, 2024
HomeUncategorizedಬೆಳ್ತಂಗಡಿ: ಪಕ್ಕದ ಅಂಗಡಿ ಗೋಡೆ ಕೊರೆದು ಕಳ್ಳತನಕ್ಕೆ ಯತ್ನ; ಖಾಲಿ ಕೈಯಲ್ಲಿ ವಾಪಸ್ಸಾದ ಕಳ್ಳರು

ಬೆಳ್ತಂಗಡಿ: ಪಕ್ಕದ ಅಂಗಡಿ ಗೋಡೆ ಕೊರೆದು ಕಳ್ಳತನಕ್ಕೆ ಯತ್ನ; ಖಾಲಿ ಕೈಯಲ್ಲಿ ವಾಪಸ್ಸಾದ ಕಳ್ಳರು

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆ ಮುಖ್ಯ ರಸ್ತೆಯಲ್ಲಿರುವ ಆನಂದ ಅಚಾರಿಯವರ ಮಾಲಕತ್ವದ ಶ್ರೀ ಶಾರದಾ ಜ್ಯೂವೆಲರ್ಸ್ ಗೆ ನಿನ್ನೆ ತಡ ರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಜ್ಯೂವೆಲರ್ಸ್ ನ ಚಿನ್ನಾಭರಣಗಳಿರುವ ರೂಂ ನ ಹೊರಗಡೆಯಿಂದ ಗಟ್ಟಿಯಾದ ಕಬ್ಬಿಣದ ಕಪಾಡು ಮಾಡಿ ಭದ್ರತೆ ಮಾಡಿದ್ದರಿಂದ ಯಾವುದೇ ಚಿನ್ನಾಭರಣ ವಸ್ತುಗಳನ್ನು ಕಳ್ಳತನ ಮಾಡಲು ಸಾಧ್ಯವಾಗಿಲ್ಲ.


ಹೀಗಾಗಿ ಜ್ಯೂವೆಲರ್ಸ್ ನ ಹಿಂಬದಿಯಲ್ಲಿರುವ ನಿಧಿ ಸ್ಟೋರ್ ಗೆ ಸೇರಿದ ಗೋಡೌನ್ ನ ಮೇಲ್ಭಾಗದ ತಗಡಿನ ಶೀಟ್ ಜಾರಿಸಿ ಒಳನುಗ್ಗಿದ ಕಳ್ಳರು ನಂತರ ಜ್ಯೂವೆಲರ್ಸ್ ಪಕ್ಕದ ಅಂಗಡಿಯ ಸಂಜೀವ ಗೌಡರ ಮಾಲಕತ್ವದ ಧನ್ವಂತರಿ ಅಯುರ್ವೆಧಿಕ್ ಮೇಡಿಕಲ್ ಶಾಪ್ ನ ಗೋಡೆ ಕೊರೆದು ಶ್ರೀ ಶಾರದಾ ಜ್ಯುವೆಲರ್ಸ್ ಗೆ ನುಗ್ಗಿದ್ದಾರೆ.

ಬೆಳಗ್ಗೆ ಎಂದಿನಂತೆ ಅಂಗಡಿ ತೆರೆಯಲು ಬಂದ ಮಾಲಕರು ಕಳ್ಳತನದ ಮಾಹಿತಿಯನ್ನು ತಿಳಿದು ಉಜಿರೆಯ ಉದ್ಯಮಿ ರವಿಚಂದ್ರ ಚಕ್ಕಿತ್ತಾಯ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!