- Advertisement -
- Advertisement -
ಮಂಗಳೂರು: ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಶಿವಮೊಗ್ಗ ಹಾಗೂ ಮಂಗಳೂರು ಮೂಲದ ಮೂವರನ್ನು ಬಂಧಿಸಲಾಗಿದೆ. ಶಿವಮೊಗ್ಗದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಲ್ಲಿ ಇಬ್ಬರು ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲೂ ದುಷ್ಕೃತ್ಯ ಎಸಗಿ ಬಂಧಿತರಾಗಿದ್ದರು.
ಇವರು 2020 ನವೆಂಬರ್ 27ರಂದು ಮಂಗಳೂರು ನಗರದ ಕದ್ರಿ ಮತ್ತು ಕೋರ್ಟ್ ರಸ್ತೆಯ ಗೋಡೆಗಳಲ್ಲಿ ಉಗ್ರ ಪರ ಬರಹಗಳನ್ನು ಬರೆದಿದ್ದರು. ಇವರು ‘ಲಷ್ಕರ್ ಇ ತೋಯ್ಬಾ’ ಉಗ್ರ ಸಂಘಟನೆಯ ಪರ ಜಿಂದಾಬಾದ್ ಎಂದು ಗೋಡೆ ಬರಹ ಬರೆದು ಆತಂಕ ಸೃಷ್ಟಿಸಿದ್ದರು. ಆ ಬಳಿಕ ಪೊಲೀಸರು ಆ ಗೋಡೆ ಬರಹನ್ನು ಅಳಿಸಿ ಹಾಕಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಬಂಧಿತರಾಗಿದ್ದ ಆರೋಪಿಗಳಿಗೆ ಬಳಿಕ ಜಾಮೀನು ಸಿಕ್ಕಿತ್ತು.
- Advertisement -