ಮಂಗಳೂರು : ಸುಮಾರು ಎಂಟು ವರ್ಷಗಳಿಂದ ಬೀದಿ ನಾಯಿಯ ಮರಿ , ಬೆಕ್ಕಿನ ಮರಿಗಳ ರಕ್ಷಣೆ ಮಾಡುವ ಕೆಲಸ ಮಾಡುತ್ತಿರುವ ಆಸರೆ ಅನಿಮಲ್ ಟ್ರಸ್ಟ್ (ರಿ ) ಸುರತ್ಕಲ್ ವತಿಯಿಂದ ನಿರ್ಗತಿಕ ಮೂಕ ಪ್ರಾಣಿಗಳಿಗೆ ಸೂರು ನಿರ್ಮಿಸುವ ನಿಟ್ಟಿನಲ್ಲಿ ಇಂದು ಸುರತ್ಕಲ್ ನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಆಸರೆ ಅನಿಮಲ್ ಟ್ರಸ್ಟಿ
ಸಾಕ್ಷಿ ಸುನಿಲ್ ಕಾಮತ್,ಸದಸ್ಯರಾದ ಸುನಿಲ್ ಕಾಮತ್, ದೀಕ್ಷಿತ, ಶಶಾಂಕ್, ಸೋನಲ್, ಗ್ಲಾನ್, ಹಾಗೂ ಸೂರು ನಿರ್ಮಾಣ ಕಾರ್ಯಾಗಾರ ಪ್ರಶಾಂತ್ ಮತ್ತಿತರರು ಉಪಸ್ಥಿತಿದ್ದರು.

ಪ್ರತಿವರ್ಷ ನಡೆಸಿಕೊಂಡು ಬರುವ ಸಮಾಜಮುಖಿ ಕಾರ್ಯಕ್ರಮಗಳು;
ಸರಿಸುಮಾರು ಏಂಟು ವರ್ಷಗಳಿಂದ ಬೀದಿ ನಾಯಿಗಳ ಮರಿ,ಬೆಕ್ಕಿನ ಮರಿಗಳ ರಕ್ಷಣೆ ಮಾಡಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಬೀದಿನಾಯಿಗಳಿಗೆ ಒಂದು ಹೊತ್ತು ಉತ್ತಮ ದರ್ಜೆಯ ಊಟ ನೀಡಿದ್ದಾರೆ. ವರ್ಷದಲ್ಲಿ ಎರಡು ಬಾರಿ ಉಚಿತ ದೇಸಿ ನಾಯಿಮರಿಗಳ ಹಾಗೂ ಬೆಕ್ಕಿನ ಮರಿಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಸುತ್ತಾರೆ. ಉಚಿತ ಹುಚ್ಚುನಾಯಿ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರಸ್ತುತ ಆಸರೆ ಅನಿಮಲ್ ಟ್ರಸ್ಟ್ ನಲ್ಲಿ 60 ಕ್ಕೂ ಅಧಿಕ ಮೂಕ ಪ್ರಾಣಿಗಳಿಗೆ ಆಸರೆ ನೀಡಲಾಗಿದೆ.

ಟ್ರಸ್ಟ್ ಕಷ್ಟದಲ್ಲಿ ಬೆಳೆದು ಬಂದ ಹಾದಿ: ಬೀದಿನಾಯಿಮರಿಗಳು, ಬೆಕ್ಕಿನ ಮರಿಗಳನ್ನು ಏಂಟು ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿರುವ ಟ್ರಸ್ಟ್ ಗೆ ಸರಕಾರದ ಅಥವಾ ಮಹಾನಗರ ಪಾಲಿಕೆ ವತಿಯಿಂದ ಯಾವುದೇ ಧನಸಹಾಯ ಸಿಕ್ಕಿಲ್ಲ. ಸಂಸ್ಥೆಗೆ ಹಲವರು ಸಹೃದಯ ದಾನಿಗಳು ನೀಡಿದ ಸಹಾಯದಿಂದ ಹಾಗೂ ಟ್ರಸ್ಟ್ ಪರಿಶ್ರಮದಿಂದ ಸುಮಾರು 60 ಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಪ್ರತಿ ದಿನಕ್ಕೆ ಸುಮಾರು ಎರಡು ಸಾವಿರ ರೂಪಾಯಿ ಖರ್ಚು ಆಗುತ್ತಿದೆ. ಇದೀಗ ಪ್ರಾಣಿಗಳನ್ನು ಸಲಹಲು ಸ್ಥಳಾವಕಾಶ ಅಭಾವ ಇರುವುದರಿಂದ ಟ್ರಸ್ಟಿಯವರ ಸ್ವಂತ ಜಾಗದಲ್ಲಿ ಮೂಕ ಪ್ರಾಣಿಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸುಮಾರು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸೂರು ನಿರ್ಮಾಣ ಮಾಡಲು ಕಾರ್ಯ ಯೋಜನೆ ರೂಪಿಸಿದ್ದಾರೆ. ಆದ್ರೆ ಇವರ ಅನಿಮಲ್ ಟ್ರಸ್ಟ್ ನಲ್ಲಿರುವ ಮೂಕ ಪ್ರಾಣಿಗಳ ಬೆಳವಣಿಗೆಗೆ ಸಾರ್ವಜನಿಕರ ಸಹಾಯದ ಅಗತ್ಯ ಹೆಚ್ಚಾಗಿದೆ.

ಆಸರೆ ಅನಿಮಲ್ ಟ್ರಸ್ಟ್ ಗೆ ಸಹಾಯಧನ ಮಾಡಲು ಇಚ್ಚಿಸುವವರ ಈ ಕೆಳಗಿನ ಬ್ಯಾಂಕ್ ಗೆ ಸಹಾಯ ಮಾಡಬಹುದಾಗಿದೆ.
ಆಸರೆ ಅನಿಮಲ್ ಟ್ರಸ್ಟ್ : IFSC CODE KARB0000351
A/C – 3512000100060001
KARNATAKA BANK EDYA BRANCH
UPI 7975124932
