ತಮಿಳುನಾಡು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಿನ್ನೆಲೆ ನಮ್ಮ ರಾಷ್ಟ್ರಧ್ವಜವನ್ನು ಪ್ರೊಫೈಲ್ ಪಿಕ್ಗಳಾಗಿ ಹಾಕುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಅನೇಕರು ತಮ್ಮ ಫೇಸ್ಬುಕ್ ಮತ್ತು ವಾಟ್ಸಾಪ್ ಪ್ರೊಫೈಲ್ ಪಿಕ್ಗಳಾಗಿ ಫ್ಲ್ಯಾಗ್ಗಳನ್ನು ಹಾಕಿದ್ದಾರೆ. ಆದರೆ, ತಮಿಳುನಾಡಿನ ಕಲಾವಿದರೊಬ್ಬರು ವಿಭಿನ್ನವಾಗಿ ಪ್ರಯತ್ನವನ್ನು ಪ್ರದರ್ಶಿಸಿದ್ದಾರೆ. ನಮ್ಮ ತ್ರಿವರ್ಣ ಧ್ವಜದ ಮೇಲಿನ ಗೌರವ ಮತ್ತು ಪ್ರೀತಿಯನ್ನು ವಿನೂತನ ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ರಾಜಾ ಎಂಬ 52 ವರ್ಷದ ವ್ಯಕ್ತಿ ಬಲಗಣ್ಣಿನ ಮೇಲೆ ತ್ರಿವರ್ಣ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಅಕ್ಕಸಾಲಿಗರಾಗಿರುವ ರಾಜಾ ಈ ಹಿಂದೆಯೂ ಹಲವು ಕಿರುಚಿತ್ರಗಳನ್ನು ರಚಿಸಿದ್ದಾರೆ.
ಇತ್ತೀಚೆಗೆ ಅವರು ನಮ್ಮ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಜಾಗೃತಿ ಮೂಡಿಸಲು ಅವರ ಕಣ್ಣಿಗೆ ರಾಷ್ಟ್ರಧ್ವಜವನ್ನು ಚಿತ್ರಿಸಿಕೊಂಡಿದ್ದಾರೆ. ಈ ತ್ರಿವರ್ಣ ಧ್ವಜವನ್ನು ಅಲಂಕರಿಸಲು ಮೊಟ್ಟೆಯ ಬಿಳಿಭಾಗದ ಮಿಶ್ರಣವನ್ನು ಬಳಸಲಾಗಿದೆ. ಕನ್ನಡಿ ನೋಡಿಕೊಂಡು ಕಣ್ಣಿಗೆ ಬಣ್ಣ ಹಚ್ಚಿಕೊಂಡೆ. ಸತತ 16 ಬಾರಿ ಪ್ರಯತ್ನಪಟ್ಟು ತ್ರಿವರ್ಣ ಧ್ವಜವನ್ನು ಸರಿಯಾಗಿ ಬಿಡಿಸಲು ಸಾಧ್ಯವಾಯಿತು ಎಂದರು. ಈ ಪೇಂಟ್ ಮುಗಿಸಲು 20 ನಿಮಿಷ ಬೇಕಾಯಿತು. ಆದ್ರೆ, ನನ್ನಂತೆ ಯಾರೂ ಕೂಡ ಟ್ರೈ ಮಾಡ್ಬೇಡಿ ಎಂದಿದ್ದಾರೆ.
ಕಣ್ಣಿಗೆ ಬಣ್ಣ ಹಚ್ಚುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಇಂತಹ ಕ್ರಮಗಳು ಕಣ್ಣಿಗೆ ಖಂಡಿತ ಹಾನಿಯುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ತ್ರಿವರ್ಣ ಧ್ವಜವನ್ನು ಬಿಡಿಸಲು ಬಳಸುವ ವಸ್ತುಗಳಿಂದ ಅಲರ್ಜಿ ಮತ್ತು ಕಣ್ಣಿನ ತುರಿಕೆ ಉಂಟಾಗುತ್ತದೆ. ಬಣ್ಣ ಬಳಿಯುವಾಗ ಕಣ್ಣಿಗೆ ಗಂಭೀರ ಗಾಯವಾಗುವ ಸಂಭವವಿದೆ ಎಂದು ಎಚ್ಚರಿಸಿದರು. ಇತ್ತೀಚೆಗೆ ಯುವಕನೊಬ್ಬ ಕಣ್ಣಿನ ಮೇಲೆ ಹಚ್ಚೆ ಹಾಕಿಸಿಕೊಂಡು ದೃಷ್ಟಿ ಕಳೆದುಕೊಂಡಿದ್ದ ಘಟನೆ ನಡೆದಿತ್ತು.