- Advertisement -
- Advertisement -
ಮಂಗಳೂರು: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಕೇರಳದ ಗಡಿ ಭಾಗದ ಮೂಲಕ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ರು ಎನ್ನಲಾಗಿದೆ.
ಉಳ್ಳಾಲ ಮೇಲಂಗಡಿಯ ಅಬ್ದುಲ್ ರೆಹಮಾನ್ ಅರ್ಫಾನ್, ಬೋಳೂರು ಬೊಕ್ಕಪಟ್ಟದ ಅಬ್ದುಲ್ ಜಲೀಲ್ ಮತ್ತು ಬೋಳಿಯಾರ್ ಕಾಪಿಕಾಡ್ನ ಮೊಹಮ್ಮದ್ ಮನ್ಸೂರ್ ಬಂಧಿತರು. ಬಂಧಿತರಿಂದ 1,62,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
- Advertisement -