- Advertisement -
- Advertisement -
ವಿಟ್ಲ: ಕೊಳ್ನಾಡು ಗ್ರಾಮದ ಮಾಡರಸು ಕುಡಿ ಅಡಿತ್ತಾಯ ಐವರು ಬಂಟರು ದೈವಸ್ಥಾನದ ಕಾಣಿಕೆ ಡಬ್ಬಿಯನ್ನು 2019ರ ಜನವರಿ 02 ರಂದು ರಾತ್ರಿ ಹೊತ್ತು ಕಳವು ಮಾಡಲಾಗಿತ್ತು.2019 ರಲ್ಲಿ ಈ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೈವಸ್ಥಾನದ ಆಡಳಿತಕ್ಕೆ ಸಂಬಂಧ ಪಟ್ಟ ರಮೇಶ್ ರಾವ್ ಎಂಬವರು ದೂರು ದಾಖಲಿಸಿದ್ದರು.
ಇದೀಗ ಈ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸ್ ಠಾಣೆಯ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದ್ದಾರೆ. ಆರೋಪಿ ಪುತ್ತೂರು ಚೇತನಾ ಆಸ್ಪತ್ರೆಯ ಬಳಿ ವಾಸವಾಗಿರುವ ಮೂಸ ಬ್ಯಾರಿ ಎಂಬವರ ಮಗ ಮೊಹಮ್ಮದ್ ಸಾದಿಕ್ ಎಂದು ತಿಳಿದು ಬಂದಿದೆ.
- Advertisement -