- Advertisement -
- Advertisement -
ಮುಂಡಾಜೆ: ಇಲ್ಲಿನ ಅರೆಕ್ಕಲ್ ಮನೆ ನಿವಾಸಿ, ಬೆಳ್ತಂಗಡಿ ನಂದಿನಿ ಕ್ಯಾಂಟೀನ್ ಮಾಲಕ ಅರೆಕ್ಕಲ್ ರಾಮಚಂದ್ರ ಭಟ್ಟ ಅವರ ತಾಯಿ, ದಿ. ಅನಂತ ಪದ್ಮನಾಭ ಭಟ್ಟ ಶೆಂಡ್ಯೆ ಅವರ ಧರ್ಮಪತ್ನಿ ಲಲಿತಾ ಯಾನೆ ರಾಧಾ ಭಾಯಿ (94ವ.) ಅವರು ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.
ಕಳೆದ ಒಂದು ವರ್ಷಗಳಿಂದ ಅವರು ಅನಾರೋಗ್ಯಕ್ಕೊಳಗಾಗಿ ಮನೆಯಲ್ಲೇ ಆರೈಕೆಯಲ್ಲಿದ್ದರು.
ಮೃತರು ಪುತ್ರ ರಾಮಚಂದ್ರ ಭಟ್ಟ ಸಹಿತ ಮೂವರು ಪುತ್ರಿಯರಾದ ವಿಮಲಾ ಫಡ್ಕೆ ಮೈಸೂರು, ಜಯಪ್ರದಾ ಫಡ್ಕೆ ಮೈಸೂರು ಮತ್ತು ಕಸ್ತೂರಿ ಚಿಪ್ಳೂನ್ಕರ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
- Advertisement -