- Advertisement -
![]()
- Advertisement -
ಬೆಳ್ತಂಗಡಿ; ಎಸ್ ಎಸ್ ಎಲ್ ಸಿ ಮರುಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆ ಬರೆದ ಉರುವಾಲು ಶ್ರೀ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ 5 ಹೆಚ್ಚುವರಿ ಅಂಕ ಗಳಿಸಿ 625 ರಲ್ಲಿ ಒಟ್ಟು 617 (98.72%) ಅಂಕ ಗಳಿಸಿರುತ್ತಾಳೆ.
ಈಕೆ ಇಳಂತಿಲ ಗ್ರಾಮದ ಅಟಾಲು ನಿವಾಸಿ ಸರ್ಕಾರಿ ವಿಶೇಷ ಅಭಿಯೋಜಕ ಮನೋಹರ ಕುಮಾರ್ ಮತ್ತು ನಯನಾ ದಂಪತಿಯ ಪುತ್ರಿ. ಪ್ರಸ್ತುತ ಗುರುವಾಯನಕೆರೆಯ ಎಕ್ಸೆಲ್ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.
- Advertisement -


