Friday, June 27, 2025
Homeಕರಾವಳಿಉಡುಪಿ`ಅನರ್‌ಕಲಿ’ ತುಳು ಸಿನೆಮಾ ಕರಾವಳಿಯಾದ್ಯಂತ ತೆರೆಗೆ

`ಅನರ್‌ಕಲಿ’ ತುಳು ಸಿನೆಮಾ ಕರಾವಳಿಯಾದ್ಯಂತ ತೆರೆಗೆ

spot_img
- Advertisement -
- Advertisement -

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್‌ ಮತ್ತು ಲೋ ಬಜೆಟ್‌ ಪ್ರೊಡಕ್ಷನ್‌ ನಿರ್ಮಾಣದ ಹರ್ಷಿತ್‌ ಸೋಮೇಶ್ವರ ನಿರ್ದೇಶನದ “ಅನರ್‌ಕಲಿ’ ತುಳು ಸಿನೆಮಾ ಶುಕ್ರವಾರದಂದು ಮಂಗಳೂರಿನ ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿತು.

ಮಂಗಳೂರಿನ ಭಾರತ್‌ ಸಿನೆಮಾಸ್‌ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೂಪವಾಣಿ, ಪಿವಿಆರ್‌, ಭಾರತ್‌ ಸಿನೆಮಾಸ್‌, ಸಿನೆಪೊಲಿಸ್‌, ಸುರತ್ಕಲ್‌ನಲ್ಲಿ ನಟರಾಜ್‌, ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್‌ ಸಿನೆಮಾಸ್‌, ಉಡುಪಿಯಲ್ಲಿ ಭಾರತ್‌ ಸಿನೆಮಾಸ್‌, ಮಣಿಪಾಲದಲ್ಲಿ ಭಾರತ್‌ ಸಿನೆಮಾಸ್‌, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್‌, ಪುತ್ತೂರಿನಲ್ಲಿ ಭಾರತ್‌ ಸಿನೆಮಾಸ್‌ನಲ್ಲಿ ಶುಕ್ರವಾರದಂದು ಸಿನಿಮಾ ಬಿಡುಗಡೆಗೊಂಡಿತು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿ ಕಾಪಿಕಾಡ್‌, ಅರವಿಂದ್‌ ಬೋಳಾರ್‌, ಕಿಶೋರ್‌ ಡಿ.ಶೆಟ್ಟಿ,  ಭೋಜರಾಜ ವಾಮಂಜೂರು, ಪ್ರಕಾಶ್‌ ಪಾಂಡೇಶ್ವರ್‌, ನವನೀತ್‌ ಶೆಟ್ಟಿ, ಆರ್‌.ಧನರಾಜ್‌, ಚಂದ್ರಹಾಸ ಶೆಟ್ಟಿ, ಲಂಚುಲಾಲ್‌,  ಚಂದ್ರಶೇಖರ ಶೆಟ್ಟಿ,ವಿಜಯ್‌ ಶೋಭರಾಜ್‌ ಪಾವೂರು, ಮಧುರಾ ಆರ್‌.ಜೆ., ಪ್ರದೀಪ್‌ ಆಳ್ವ ಕದ್ರಿ, ಪುರುಷೋತ್ತಮ ಭಂಡಾರಿ ಅಡ್ಯಾರ್‌, ಗಿರೀಶ್‌ ಎಂ. ಶೆಟ್ಟಿ ಕಟೀಲು, ಮೋಹನ್‌ ಕೊಪ್ಪಲ, ದಿವಾಕರ ಶೆಟ್ಟಿ, ಇಸ್ಮಾಯಿಲ್‌ ಮೂಡುಶೆಡ್ಡೆ, ಬಾಳ ಜಗನ್ನಾಥ ಶೆಟ್ಟಿ ಬಾಳ, ಲೋಕಯ್ಯ ಶೆಟ್ಟಿ ಮುಂಚೂರು, ಯಶೋದಾ ಸಂಜೀವ ಕೋಟ್ಯಾನ್‌, ತಾರಾನಾಥ್‌ ಶೆಟ್ಟಿ ಬೋಳಾರ್‌, ರಜನೀಶ್‌ ಕೋಟ್ಯಾನ್‌ ಮುಂತಾದವರು ಉಪಸ್ಥಿತರಿದ್ದರು. 

ಅನರ್‌ಕಲಿ ಸಿನಿಮಾದಲ್ಲಿ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ದೀಪಕ್‌ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್‌ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದು, ನಾಯಕ ನಟನಾಗಿ ವಿಜಯ್‌ ಶೋಭರಾಜ್‌ ಪಾವೂರು, ನಾಯಕಿಯಾಗಿ ಮಧುರಾ ಆರ್‌. ಜೆ. ಅಭಿನಯಿಸಿದ್ದಾರೆ.

- Advertisement -
spot_img

Latest News

error: Content is protected !!