- Advertisement -
- Advertisement -
ಕಾವು: ಎರಡು ಕಾರುಗಳ ನಡುವೆ ಅಪಘಾತ ನಡೆದ ಘಟನೆ ಕಾವು ಬುಶ್ರಾ ಸ್ಕೂಲ್ ಬಳಿ ನಡೆದಿದೆ. ಪೈಚಾರಿನಿಂದ ಮಾಡಾವಿಗೆ ಚಲಿಸುತ್ತಿದ್ದ ಓಮ್ಮಿ ಕಾರು ಹಾಗೂ ಪುತ್ತೂರು ಭಾಗದಿಂದ ಸುಳ್ಯ ಕಡೆ ಚಲಿಸುತ್ತಿದ್ದ ಸೆಲಾರಿಯೊ ಕಾರ್ ನಡುವೆ ಭೀಕರ ಅಪಘಾತವಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಸೆಲಾರಿಯೊ ಕಾರ್ ನಲ್ಲಿ ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಹಾಗೂ ಓಮ್ಮಿಯಲ್ಲಿ ಈ ಹಿಂದೆ ಬೆಳ್ಳಾರೆ ಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದವರು ಹಾಗೂ ಪ್ರಸ್ತುತ ಈಗ ಮಾಡಾವಿನಲ್ಲಿ ರಬ್ಬರ್ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಹನೀಫ್ ಎಂಬುವರು ಇದ್ದರು ಎನ್ನಲಾಗಿದೆ.
ಸಂಪ್ಯ ಪೋಲಿಸ್ ಠಾಣೆಯವರು ಘಟನಾ ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ..
- Advertisement -