- Advertisement -
- Advertisement -
ಶಿವಮೊಗ್ಗ: ಶಂಕಿತ ಉಗ್ರರ ಮೂಲ ತೀರ್ಥಹಳ್ಳಿ ಆಗಿದ್ದರೂ ಅವರ ಸಹವಾಸ ಕರಾವಳಿಯದ್ದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಂಕಿತ ಉಗ್ರರಿಗೆ ಕರಾವಳಿ, ಕೇರಳದ ನಂಟು ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಕರಾವಳಿಯಲ್ಲಿನ ಮತಾಂಧರ ಸಹವಾಸದಿಂದ ಈ ರೀತಿಯಾಗಿದೆ. ಇಂತಹ ವ್ಯಕ್ತಿಗಳು ಬೆಳೆಯುವ ಮುನ್ನವೇ ಬಂಧಿಸಿದ ಶಿವಮೊಗ್ಗ ಪೊಲೀಸರನ್ನು ಪುರಸ್ಕರಿಸುತ್ತೇವೆ ಎಂದರು. ಹಾಗೇ ಇನ್ನು ಬಂಧಿತ ಶಂಕಿತ ಉಗ್ರರು ಏನೆಲ್ಲ ನಂಟು ಹೊಂದಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
- Advertisement -