Wednesday, May 15, 2024
Homeಕರಾವಳಿಕಾಂತಾರ ವಿರುದ್ಧ ಕೃತಿಚೌರ್ಯ ಆರೋಪ: ಕೇಸ್‌ ಹಾಕಲು ನಿರ್ಧರಿಸಿದ ʻತೈಕ್ಕುಡಂ ಬ್ರಿಡ್ಜ್​’ ತಂಡ

ಕಾಂತಾರ ವಿರುದ್ಧ ಕೃತಿಚೌರ್ಯ ಆರೋಪ: ಕೇಸ್‌ ಹಾಕಲು ನಿರ್ಧರಿಸಿದ ʻತೈಕ್ಕುಡಂ ಬ್ರಿಡ್ಜ್​’ ತಂಡ

spot_img
- Advertisement -
- Advertisement -

ರಿಷಬ್​ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರದ ಹಾಡುಗಳು ಕೂಡ ಜನಮನ ಗೆದ್ದಿವೆ. ಅದರಲ್ಲೂ ‘ವರಾಹ ರೂಪಂ..’ ಗೀತೆಯನ್ನು ಕೇಳಿ ಜನರು ತಲೆದೂಗಿದ್ದಾರೆ. ಆದರೆ ಈ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ.

ಹೌದು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​’ ತಂಡದವರು ಕೇಸ್​ ಹಾಕಲು ನಿರ್ಧರಿಸಿದ್ದಾರೆ.

ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್​’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್​’ ತಂಡ ಸೋಶಿಯಲ್​ ಮೀಡಿಯಾದಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!