- Advertisement -
- Advertisement -
ಹಿಂದೂಗಳ ಧಾರ್ಮಿಲಕ ಪುಣ್ಯಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನಂನಲ್ಲಿ (ಟಿಟಿಡಿ) ಕೆಲಸ ಮಾಡುವವರೆಲ್ಲರೂ ಹಿಂದೂಗಳೇ ಆಗಿರಬೇಕು. ಇದನ್ನು ಖಚಿತಪಡಿಸಿಕೊಳ್ಳುವುದು ನನ್ನ ಮೊದಲ ಕೆಲಸ ಎಂದು ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್.ನಾಯ್ಡು ಹೇಳಿದ್ದಾರೆ.
ಬಿ.ಆರ್.ನಾಯ್ಡು ಈ ಕುರಿತಂತೆ ತಿರುಪತಿಯಲ್ಲಿ ಮಾತನಾಡಿ, ‘ರಾಜ್ಯ ಸರಕಾರದೊಂದಿಗೆ ನಾನು ಸದ್ಯ ನೇಮಕ ಗೊಂಡಿರುವ ಇತರ ಧರ್ಮ ದವರನ್ನು ಇತರ ಸರಕಾರಿ ಇಲಾಖೆಗಳಿಗೆ ಕಳುಹಿಸ ಬೇಕೇ ಅಥವಾ ಸೇವೆಯಿಂದ ಬಿಡುಗಡೆ ಮಾಡ ಬೇಕೇ ಎಂಬ ಬಗ್ಗೆ ಚರ್ಚಿ ಸುತ್ತೇನೆ ಎಂದರು. ಹಿಂದಿನ ಜಗನ್ ರೆಡ್ಡಿ ಸರಕಾರ ದಲ್ಲಿ ಹಲವು ಅಕ್ರಮಗಳು ನಡೆದಿವೆ. ಅವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
- Advertisement -