Thursday, May 2, 2024
Homeತಾಜಾ ಸುದ್ದಿಆದಿಲ್ ಮೈಸೂರು ಜೈಲಿನಲ್ಲಿ ಇದ್ದುಕೊಂಡೇ ನನಗೆ ಮೆಸೇಜ್ ಮಾಡುತ್ತಿದ್ದಾನೆ; ರಾಖಿ ಸಾವಂತ್ ಸಿಡಿದಿದ್ರು ಹೊಸ ಬಾಂಬ್

ಆದಿಲ್ ಮೈಸೂರು ಜೈಲಿನಲ್ಲಿ ಇದ್ದುಕೊಂಡೇ ನನಗೆ ಮೆಸೇಜ್ ಮಾಡುತ್ತಿದ್ದಾನೆ; ರಾಖಿ ಸಾವಂತ್ ಸಿಡಿದಿದ್ರು ಹೊಸ ಬಾಂಬ್

spot_img
- Advertisement -
- Advertisement -

 ಮುಂಬೈ; ಆದಿಲ್ ಮೈಸೂರಿನ ಜೈಲಿನಲ್ಲಿದ್ದುಕೊಂಡು ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದೇನೆ ಎಂದು ರಾಖಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾರೆ.

 ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ, ಬೇರೆದೆಲ್ಲ ಬಿಡು ಅಂತ ಹೇಳಿದ್ದರೂ ಕೇಳಿಲ್ಲ. ಆದಿಲ್ ಖುರಾನ್‌ನ ಮೇಲೆ ಆಣೆ ಮಾಡಿ ಸರಿಯಾಗಿ ಇರ್ತೀನಿ ಅಂತ ಹೇಳಬೇಕು , ಕೋರ್ಟ್‌ನಲ್ಲಿ ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು. ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್‌ನನ್ನು ಕ್ಷಮಿಸೋದಿಲ್ಲ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರೋಕೆ ಇಷ್ಟಪಡ್ತಿದ್ದಾನೆ. ಅವನು ವಾಪಾಸ್ ಬರೋದು ನನ್ನನ್ನು ಕೊಲ್ಲೋದಿಕ್ಕಾ? ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು ಅಂತ ನಾನು ಆದಿಲ್‌ಗೆ ವಿಚ್ಛೇದನ ಕೊಡೋದಿಲ್ಲ. ಜೀವನದಲ್ಲಿ ನಾನು ಇನ್ಮುಂದೆ ಮದುವೆ ಆಗೋದಿಲ್ಲ. ಮಕ್ಕಳ ಬಗ್ಗೆಯೂ ಯೋಚನೆ ಮಾಡೋದಿಲ್ಲ. ನನ್ನ ಅಕಾಡೆಮಿಯ ಮಕ್ಕಳು ನನ್ನ ಮಕ್ಕಳು ಎಂದು ರಾಖಿ ಸಾವಂತ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!