- Advertisement -
- Advertisement -
ಬೆಂಗಳೂರು; ಖ್ಯಾತ ನೇತ್ರ ತಜ್ಞ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ನಿಧನಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸೋಷಿಯಲ್ ಪೋಸ್ಟ್ ಶೇರ್ ಮಾಡಿರುವ ಅವರು ದೃಷ್ಟಿಯ ಮಹತ್ವ ಜಗತ್ತಿಗೆ ಸಾರಿದ ಮಹಾನುಭಾವ ಇಂದು ಚಿರನಿದ್ರೆಗೆ .. ನಿಮ್ಮ ಕಣ್ಣು ಮುಚ್ಚಿದರೂ ನಿಮ್ಮ ಕನಸು ಚಿರಾಯು.. ಎಂದು ಬರೆದಿದ್ದಾರೆ.
ಅಂಧರ ಪಾಲಿನ ಆಶಾಕಿರಣವಾಗಿದ್ದ ಭುಜಂಗ ಶೆಟ್ಟಿ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
- Advertisement -