- Advertisement -
- Advertisement -
ಮಂಗಳೂರು: ತುಳು ರಂಗಭೂಮಿಯ ನಿರ್ದೇಶಕ, ಹಿರಿಯ ಚಲನಚಿತ್ರ ನಟ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ ಇಂದು ನಿಧನ ಹೊಂದಿದ್ದಾರೆ.
ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವ ಮಾಧವ ಜಪ್ಪುಪಟ್ನ, ಹಲವಾರು ಪ್ರತಿಭೆಗಳನ್ನು ತುಳು ರಂಗಭೂಮಿಗೆ ಪರಿಚಯಿಸಿದ್ದಾರೆ. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮೊಕ್ತೇಸರಾಗಿದ್ದ ಅವರು, ನವನಿಧಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರು ಕೂಡಾ ಆಗಿದ್ದರು.
ಮೃತರ ಅಂತ್ಯ ಸಂಸ್ಕಾರವು ಇಂದು ಅಪರಾಹ್ನ ನಂದಿಗುಡ್ಡೆ ರುದ್ರ ಭೂಮಿಯಲ್ಲಿ ನಡೆಯಲಿದೆ.
- Advertisement -