Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಭಾರತಿ  ಬಿಲ್ಡರ್ಸ್  ಕಛೇರಿ ಮೇಲೆ ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ಭಾರತಿ  ಬಿಲ್ಡರ್ಸ್  ಕಛೇರಿ ಮೇಲೆ ಶೂಟೌಟ್ ಪ್ರಕರಣ; ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು;  ಬಿಜೈ  ಭಾರತಿ  ಬಿಲ್ಡರ್ಸ್  ಕಛೇರಿಗೆ   ಭೂಗತ  ಪಾತಕಿ  ರವಿ  ಪೂಜಾರಿ ಸಹಚರರು  ನಡೆಸಿದ  ಶೂಟ್ಔಟ್ ಗೆ  ಸಂಬಂದಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ  23/2014, ಕಲಂ: 447,120(b) 307 IPC & 27 Arms Act,  ರಂತೆ  ಪ್ರಕರಣ  ದಾಖಲಾಗಿದ್ದು, ಸದ್ರಿ  ಪ್ರಕರಣದ ಆರೋಪಿಯಾಗಿದ್ದ, ಮಹಾರಾಷ್ಟ್ರ ಕರಾಡ್ ಗಣೇಶ್  ಲಕ್ಷ್ಮಣ್  ಸಕಟ್   ಈತನು   ನ್ಯಾಯಾಲಯಕ್ಕೆ  ಹಾಜರಾಗದೆ  2015  ರಿಂದ  ತಲೆ  ಮರೆಸಿಕೊಂಡಿದ್ದು.  ಈತನ ವಿರುದ್ದ  ಮಾನ್ಯ ಜೆಎಂಎಫ್ ಸಿ 3ನೇ ನ್ಯಾಯಾಲಯ ಮಂಗಳೂರು  ವಾರಂಟ್  ಹೊರಡಿಸಿದ್ದು,  ಈತನನ್ನು ಮಹಾರಾಷ್ಟ್ರ ರಾಜ್ಯದ ಪಂಡರಾಪುರ  ಎಂಬಲ್ಲಿ, ಮಾನ್ಯ  ಪೊಲೀಸ್  ಆಯುಕ್ತರ  ಮಾರ್ಗದರ್ಶನದಂತೆ  ಉರ್ವಾ  ಪೊಲೀಸ್ ಠಾಣಾ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್, ಸಿಬ್ಬಂದಿಯಾದ ಹೆಚ್ ಸಿ 949 ಪ್ರಮೋದ್,  ಹೆಚ್ ಸಿ 956 ನಾರಾಯಣ, ಹೆಚ್ ಸಿ 622 ಗೋವಿಂದರಾಜ್ ರವರು ದಸ್ತಗಿರಿ ಮಾಡಿ ದಿನಾಂಕ 27.07.2025 ರಂದು  ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,  ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆತನ  ವಿರುದ್ದ ನ್ಯಾಯಾಲಯವು  ವಾರಂಟ್  ಹೊರಡಿಸಿರುತ್ತದೆ.  ಈತನ ವಿರುದ್ದ  ಮಹಾರಾಷ್ಟ್ರ   ರಾಜ್ಯದ ಸತಾರ ಜಿಲ್ಲೆ  ಕರಾಡ್  ನಲ್ಲಿಯೂ ಆರ್ಮ್ಸ ಆ್ಯಕ್ಟ್  ಪ್ರಕರಣ  ಇರುತ್ತದೆ.

- Advertisement -

Latest News

error: Content is protected !!