Thursday, May 23, 2024
Homeಕರಾವಳಿಬೆಳ್ತಂಗಡಿ : ಪುಂಜಾಲಕಟ್ಟೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ನೋಡಲು ಬರುತ್ತಿದ್ದಾಗ ಅನಾಹುತ; ಟಿಪ್ಪರ್ ಡಿಕ್ಕಿಯಾಗಿ ಸಂಬಂಧಿ ಯುವಕನೂ ಸ್ಥಳದಲ್ಲಿಯೇ ಸಾವು

ಬೆಳ್ತಂಗಡಿ : ಪುಂಜಾಲಕಟ್ಟೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ನೋಡಲು ಬರುತ್ತಿದ್ದಾಗ ಅನಾಹುತ; ಟಿಪ್ಪರ್ ಡಿಕ್ಕಿಯಾಗಿ ಸಂಬಂಧಿ ಯುವಕನೂ ಸ್ಥಳದಲ್ಲಿಯೇ ಸಾವು

spot_img
- Advertisement -
- Advertisement -

ಬೆಳ್ತಂಗಡಿ :ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದ ಮಂಟಪದ ಬಳಿ ಇಂದು ಬೆಳಗ್ಗೆ ಬಳಿ ಬೈಕ್ ಬೈಕ್ ನಡುವೆ ಅಪಘಾತ ನಡೆದು ಕಾಲೇಜ್  ವಿದ್ಯಾರ್ಥಿ ಕರಾಯದ ಮಹಮ್ಮದ್ ಶಫೀಕ್(20) ಸಾವನ್ನಪ್ಪಿದ್ದಾರೆ. 

ಈ ವಿಚಾರ ತಿಳಿದು ಕಕ್ಕೆಪದವಿನ ಸಂಬಂಧಿ ತುಂಬೆ ಐಟಿಐ ವಿದ್ಯಾರ್ಥಿ ಮಹಮ್ಮದ್ ಸಫಾನ್(20)ಬೈಕ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ನಲ್ಲಿ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಮ್ಮದ್ ಸಫಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಅಪಘಾತದ ಬಳಿಕ ಟಿಪ್ಪರ್ ವಾಹನ ಚಾಲಕ ಟಿಪ್ಪರ್ ಸಹಿತ ಪರಾರಿಯಾಗಿದ್ದಾ‌ನೆ.

ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ  ಜನ ಜಮಾಯಿಸಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ‌.

- Advertisement -
spot_img

Latest News

error: Content is protected !!