Tuesday, May 14, 2024
Homeಅಪರಾಧಮದುವೆಯಾಗಲು ಒಲ್ಲದ ಶಿಕ್ಷಕಿಯ ಅಪಹರಣ; ಸಿಸಿಟಿಯಲ್ಲಿ ಸೆರೆಯಾದ ಅಪಹರಣ ದೃಶ್ಯ

ಮದುವೆಯಾಗಲು ಒಲ್ಲದ ಶಿಕ್ಷಕಿಯ ಅಪಹರಣ; ಸಿಸಿಟಿಯಲ್ಲಿ ಸೆರೆಯಾದ ಅಪಹರಣ ದೃಶ್ಯ

spot_img
- Advertisement -
- Advertisement -

ಹಾಸನ: ಇಲ್ಲಿನ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ಮದುವೆಯಾಗಲು ಒಲ್ಲೆನೆಂದ ಶಿಕ್ಷಕಿಯನ್ನು ಅಪಹರಣ ಮಾಡಿದ ಘಟನೆ ನಡೆದಿದೆ.

ಅಪರಹರಣಕ್ಕೊಳಗಾದ ಶಿಕ್ಷಕಿ ಅರ್ಪಿತಾ. ಅಪಹರಣಗೈದ ವ್ಯಕ್ತಿ ರಾಮು ಎಂದು ಗುರುತಿಸಲಾಗಿದೆ.

ಅರ್ಪಿತಾ ಅವರು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ್‌ನಲ್ಲಿ ಬಂದು ಬಲವಂತವಾಗಿ ವ್ಯಕ್ತಿಯೋರ್ವ ಎಳೆದೊಯ್ದಿದ್ದಾರೆ. ಅರ್ಪಿತಾ ಆ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಅಪಹರಣ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮದುವೆಗೆ ಅರ್ಪಿತಾ ಮತ್ತು ಕುಟುಂಬಸ್ಥರು ಒಪ್ಪದ ಹಿನ್ನೆಲೆ ಅಪಹರಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಾಸನ ಎಸ್‌ಪಿ ಮೊಹಮ್ಮದ್ ಸುಜಾತಾ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅರ್ಪಿತಾ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

ಅರ್ಪಿತಾ ತಾಯಿ ರಾಮು ಎಂಬವನೇ ಮಗಳನ್ನು ಕಿಟ್ನಾಪ್ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಆತ ನಮ್ಮ ಚಿಕ್ಕಮನ ಮಗನಾಗಿದ್ದು, 15 ದಿನಗಳ ಹಿಂದೆ ಅಪ್ಪ-ಅಮ್ಮನ ಜೊತೆ ಬಂದಿದ್ದನು. ಮದುವೆ ಮಾಡಿಕೊಡಿ ಎಂದು ಹೇಳಿದ್ದರು. ಆದರೆ ಮಗಳು ಒಪ್ಪದ ಹಿನ್ನೆಲೆ ನಾವು ಮದುವೆಗೆ ನಿರಾಕರಿಸಿದ್ದೇವೆ ಎಂದು ಅರ್ಪಿತಾ ತಾಯಿ ಹೇಳಿದ್ದಾರೆ. ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಮಗಳಿಗೆ ಕಿರುಕುಳ ನೀಡಲು ಶುರುಮಾಡಿದ್ದನು. ಇದೀಗ ಮಗಳನ್ನ ಅಪಹರಿಸಿದ್ದಾರೆ. ಆದಷ್ಟು ಬೇಗ ಮಗಳನ್ನು ರಕ್ಷಿಸಿಕೊಡಿ ಎಂದು ಅರ್ಪಿತಾ ಕಣ್ಣೀರು ಹಾಕಿದರು.

- Advertisement -
spot_img

Latest News

error: Content is protected !!