- Advertisement -
- Advertisement -
ಕುಂದಾಪುರ: ಮನೆಯಲ್ಲಿ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಕುಂದಾಪುರ ತಾಲೂಕಿನ ಹೆಸತ್ತೂರು ಗ್ರಾಮದಲ್ಲಿ ನಡೆದಿದೆ.
ಮನೆ ಕೆಲಸದಾಕೆ ಕಳವು ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ನವೀನ್ ಶೆಟ್ಟಿ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೆಸ್ಕತ್ತೂರು ಗ್ರಾಮದ ಜಲಜಮ್ಮ ಶೆಡ್ತಿಯವರ ಮನೆಯಲ್ಲಿ ಕಳ್ಳತನವಾಗಿದೆ. ಸುಮಾರು 2 ಪವನ್ ತೂಕದ ಸುಮಾರು 1,10,000 ರೂ. ಮೌಲ್ಯದ ಒಂದು ಚಿನ್ನದ ಬಳೆ ಮತ್ತು ಎಟಿಎಂ ಕಾರ್ಡ್ ಕಳುವಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -