Friday, June 27, 2025
Homeಕರಾವಳಿಮಂಗಳೂರು ವಾತಾವರಣ ಬಹಳ ಶಾಂತಿಯುತ ವಾಗಿದೆ:ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಮಂಗಳೂರು ವಾತಾವರಣ ಬಹಳ ಶಾಂತಿಯುತ ವಾಗಿದೆ:ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು: ಮಂಗಳೂರು ವಾತಾವರಣ ಬಹಳ ಶಾಂತಿಯುತ ವಾಗಿದೆ.ಅಲ್ಲಿನ ಜನರು ತುಂಬಾ ಬುದ್ದಿವಂತರು ಎಂದು ಗೃಹ‌ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕರಾವಳಿಗರು ಆಕ್ರೋಶ ಕೂಡ ಹೊರಗೆ ಹಾಕ್ತಾರೆ.
ವ್ಯವಸ್ಥೆ ಹಾಳು ಮಾಡದ ರೀತಿ ಸಹಕರಿಸುತ್ತಾರೆ.
ಇದು ಅವರ ಸಂಸ್ಕೃತಿ.ಇವತ್ತು ಯಾವುದೇ ಗಲಾಟೆ ಗಳು ಇಲ್ಲ.ಆದರೂ ಕೂಡ ಪೊಲೀಸರು, ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ ಎಂದಿದ್ದಾರೆ.

ನಾನು ಕೂಡ ಮಂಗಳೂರಿಗೆ ಹೋಗುವ ಕಾರ್ಯಕ್ರಮ ಹಾಕ್ತಿದ್ದೇನೆ.ಸಿಎಂ ಕೂಡ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ.ಕೆಲ ಸಂಘಟನೆ ಗಳ ಮೇಲೆ ಅನುಮಾನವಿದೆ.ಕೆಲ ಮತಾಂಧ ಶಕ್ತಿಗಳು ರಕ್ತಪಾತ ಮಾಡ್ತಿವೆ.ಏಕತೆ ಭದ್ರತೆಗೆ ಭಂಗ ತಂದು, ದೇಶವನ್ನು ಹಿಂಸಾತ್ಮಕ ಮಾಡುವ ಪ್ರಯತ್ನ ಮಾಡ್ತಿದ್ದಾರೆ.ಇಂತಹ ಶಕ್ತಿ ಗಳನ್ನು ಮಟ್ಟ ಹಾಕಲು ಆಲೋಚನೆ ಮಾಡ್ತಿದ್ದೇವೆ ಎಂದಿದ್ದಾರೆ.

- Advertisement -
spot_img

Latest News

error: Content is protected !!