Friday, June 5, 2026
Homeತಾಜಾ ಸುದ್ದಿಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಲು ಸ್ವತಂತ್ರರು: ನಾನು ಹೊಸ ಶಿವಸೇನೆಯನ್ನು ರಚಿಸುತ್ತೇನೆ: ಉದ್ಧವ್‌ ಠಾಕ್ರೆ

ಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಲು ಸ್ವತಂತ್ರರು: ನಾನು ಹೊಸ ಶಿವಸೇನೆಯನ್ನು ರಚಿಸುತ್ತೇನೆ: ಉದ್ಧವ್‌ ಠಾಕ್ರೆ

- Advertisement -
- Advertisement -

ಮುಂಬೈ: ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಬಿಜೆಪಿಗೆ ಶಿವಸೇನೆ ಕಾರ್ಯಕರ್ತರು ಮತ್ತು ಪಕ್ಷಕ್ಕೆ ಮತ ಹಾಕುವವರನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ಶಿವಸೇನೆಯನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ಪಕ್ಷದ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಸಾಮಾನ್ಯ ಶಿವಸೇನೆ ಕಾರ್ಯಕರ್ತರು ತಮ್ಮ ಸಂಪತ್ತು. ಅವರು ತಮ್ಮೊಂದಿಗೆ ಇರುವವರೆಗೂ ಇತರರ ಟೀಕೆಗಳಿಗೆ ಹೆದರುವುದಿಲ್ಲ ಎಂದರು.

ಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಲು ಸ್ವತಂತ್ರರು…. ನಾನು ಹೊಸ ಶಿವಸೇನೆಯನ್ನು ರಚಿಸುತ್ತೇನೆ” ಎಂದು ಉದ್ಧವ್ ಠಾಕ್ರೆ ಹೇಳಿದರು.

ಶಿವಸೇನೆಯು ಸ್ವಂತ ಜನರಿಂದ ದ್ರೋಹಕ್ಕೆ ಒಳಗಾಗಿದೆ. ನಿಮ್ಮಲ್ಲಿ ಹಲವರು ಆಕಾಂಕ್ಷಿಗಳಾಗಿದ್ದರೂ ನಾವು ಈ ಬಂಡಾಯಗಾರರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೇವೆ. ಈ ಜನರು ನಿಮ್ಮ ಕಠಿಣ ಪರಿಶ್ರಮದಿಂದ ಆಯ್ಕೆಯಾದ ನಂತರ ಈಗ ಬಂಡಾಯವೆದ್ದಿದ್ದಾರೆ. ಆದರೆ ಈ ನಿರ್ಣಾಯಕ ಸಮಯದಲ್ಲಿ ನೀವು ಪಕ್ಷದ ಪರವಾಗಿ ನಿಂತಿದ್ದೀರಿ. ನಾನು ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗದು” ಎಂದು ಶಿವಸೇನಾ ಅಧ್ಯಕ್ಷರೂ ಆಗಿರುವ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಮೈತ್ರಿ ಪಕ್ಷಗಳ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸುವಂತೆ ಏಕನಾಥ್ ಶಿಂಧೆ ಅವರಿಗೆ ಹೇಳಿದ್ದೆ. ಶಿವಸೇನೆ ಬಿಜೆಪಿ ಜತೆ ಕೈಜೋಡಿಸುವಂತೆ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಅವರು ಹೇಳಿದರು. ಈ ಶಾಸಕರನ್ನು ನನ್ನ ಬಳಿಗೆ ಕರೆತಂದು ಚರ್ಚಿಸೋಣ ಎಂದು ಹೇಳಿದ್ದೆ. ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ., ಭರವಸೆಗಳನ್ನು ಈಡೇರಿಸಲಿಲ್ಲ, ಬಂಡಾಯಗಾರರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ, ಹಾಗಾಗಿ ಅವರು ಬಿಜೆಪಿಯೊಂದಿಗೆ ಹೋದರೆ ಅವರು ಶುದ್ಧರಾಗುತ್ತಾರೆ, ಅವರು ನಮ್ಮೊಂದಿಗೆ ಇದ್ದರೆ ಅವರು ಜೈಲಿಗೆ ಹೋಗುತ್ತಾರೆ, ಇದು ಸ್ನೇಹದ ಸಂಕೇತವೇ?” ಎಂದು ಠಾಕ್ರೆ ಕೇಳಿದರು.

- Advertisement -

Latest News

error: Content is protected !!