- Advertisement -
![]()
- Advertisement -
ಮಂಗಳೂರು: ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಶ್ರಮಿಕ್ ರೈಲಿನ ಇಂಜಿನ್ ಹಳಿ ತಪ್ಪಿದ ಘಟನೆ ನಗರದ ಹೊರವಲಯದ ಪಡೀಲ್ ರೈಲ್ವೆ ಹಳಿಯಲ್ಲಿ ನಡೆದಿದೆ.ಈ ಘಟನೆಯಲ್ಲಿ ಯಾವುದೇ ಸಾವು ನೋವು ಇಲ್ಲದೆ ಭಾರೀ ಅನಾಹುತ ತಪ್ಪಿದೆ
ಕೇರಳದ ತ್ರಿಶೂರ್ನಿಂದ ಜೈಪುರ್ಗೆ ತೆರಳುವ ಶ್ರಮಿಕ್ ಸ್ಪೆಷಲ್ ಎಕ್ಸ್ಪ್ರೆಸ್ ಮಂಗಳೂರಿನ ಪಡೀಲ್ ರೈಲ್ವೆ ಹಳಿಯಲ್ಲಿ ಇಂದು ಮದ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಹಳಿ ತಪ್ಪಿದೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ, ಮುಂಜಾನೆ 4 ರ ವೇಳೆಗೆ ಕಾರ್ಮಿಕರ ಪ್ರಯಾಣಕ್ಕೆ ಬದಲಿ ಇಂಜಿನ್ ವ್ಯವಸ್ಥೆ ಮಾಡಿದೆ .


- Advertisement -


