- Advertisement -
- Advertisement -
ಬೆಂಗಳೂರು: ಕಳೆದ 15 ದಿನಗಳಿಂದ ತಾನೇ ಬುದ್ಧಿವಂತ ಅನ್ನೋ ರೀತಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಆದರೆ ಆತ ಮಾಡಿದ ಪಾಪದ ಕೆಲಸವೇ ಆತನ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದೆ. ಹೌದು. ನಾಗೇಶನನ್ನು ಪೊಲೀಸರು ಬಂಧಿಸಲು ಆತನ ಕೈ ಮೇಲಿನ ಗಾಯ ಸುಳಿವು ನೀಡಿತ್ತು ಎಂಬ ವಿಷಯ ಬಹಿರಂಗವಾಗಿದೆ.
ಆರೋಪಿ ನಾಗೇಶ್ ಯುವತಿ ಮೇಲೆ ಆಯಸಿಡ್ ದಾಳಿ ಮಾಡುವಾಗ ಆತನ ಬಲಗೈ ಮೇಲೂ ಆಸಿಡ್ ಬಿದ್ದು ಗಾಯವಾಗಿತ್ತು. ಅದೇ ಗಾಯದ ಗುರುತು ಆತನ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದೆ.
- Advertisement -