- Advertisement -
- Advertisement -
ಮಂಗಳೂರು: ಗಾಂಜಾ ಸೇವಿಸಿ ಭಯ ಸೃಷ್ಟಿಸಲು ಇಬ್ಬರು ರೌಡಿಶೀಟರ್ ಗಳು ಗಲಾಟೆ ನಡೆಸಿರುವ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ.
ವೆಲೇನ್ಸಿಯಾ ಜಂಕ್ಷನ್ ಬಳಿ ನಿನ್ನೆ ಸಂಜೆ 6.30 ಕ್ಕೆ ಘಟನೆ ನಡೆದಿದೆ.
ರೌಡಿಶೀಟರ್ ಗಳಾದ ಪ್ರೀತಂ ಪೂಜಾರಿ, ಧೀರಜ್ ಕುಮಾರ್ ಸಾರ್ವಜನಿಕರೊಬ್ಬನಿಗೆ ಥಳಿಸುತ್ತಿದ್ದಾಗ ಅಲ್ಲೇ ಇದ್ದ ಕೋಳಿ ಅಂಗಡಿ ನೌಕರರು ಪ್ರಶ್ನಿಸಿದ್ದಾರೆ. ಆಗ ನೌಕರರಿಗೆ ಹೆಲ್ಮೆಟ್, ಕಲ್ಲಿನಿಂದ ಹಲ್ಲೆ ಮಾಡಿ ಚೂರಿಯಿಂದ ಅಟ್ಯಾಕ್ ಮಾಡಲು ಯತ್ನ ನಡೆಸಿದ್ದಾರೆ.
ಸಾರ್ವಜನಿಕರಿಗೆ ಚೂರಿ ತೋರಿಸಿ ಹೆದರಿಸಲು ಪ್ರಯತ್ನಿಸಿದಾಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಅರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Advertisement -