- Advertisement -
- Advertisement -
ಬೆಳ್ತಂಗಡಿ: ಗೋ ಹತ್ಯೆ ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಿ ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಂಜದ ಪಲ್ಕೆ ಎಂಬಲ್ಲಿ ನಡೆದಿದೆ. ಅನ್ವರ್ ಹಾಗೂ ಬಶೀರ್ ಬಂಧಿತ ಆರೋಪಿಗಳು.
ನಿನ್ನೆ ರಾತ್ರಿ 10-30 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಂಜದ ಪಲ್ಕೆ ಎಂಬಲ್ಲಿರುವ ಬಶೀರ್ ಎಂಬಾತನ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯ ಹಿಂಬದಿಯ ಒಳಗಿನ ಬಚ್ಚಲು ಕೋಣೆಯಲ್ಲಿ ಮಾಂಸಕ್ಕಾಗಿ ಕುತ್ತಿಗೆ ಕೊಯ್ದು ಕೊಂದ ಒಂದು ಹೋರಿ ಹಾಗೂ ಕೊಲ್ಲಲ್ಲು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹೋರಿ ಕರು, ಕೊಲ್ಲಲ್ಲು ಉಪಯೋಗಿಸಿದ ಕತ್ತಿ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
- Advertisement -