ಉಡುಪಿ: ಇಲ್ಲಿನ ಕಾಪುವಿನ ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ: 13-03-2022, ಭಾನುವಾರದಂದು ಒಂದು ದಿನದ ಹರಕೆಯ ಉತ್ಸವ ನಡೆಯಲಿದೆ. ಮಂಡೇಡಿ ಬಾಲಟ್ಟ ಮನೆ ಕಲ್ಯಾಣಿ ಶೆಟ್ಟಿ ಹಾಗೂ ಇವರ ಕುಟುಂಬಸ್ಥರ ಸೇವಾರ್ಥವಾಗಿ ಹರಕೆ ಉತ್ಸವ ನಡೆಯಲಿದೆ.
ನಾಳೆ ಬೆಳಗ್ಗೆ ಪಂಚ ವಿಂಶತಿ ಕಲಶ ಪ್ರಧಾನ ಹೋಮ , ಗಣಯಾಗ ದಿಂದ ಪ್ರಾರಂಭಗೊಂಡು 10:00 ಗಂಟೆಗೆ ಕಲಶಾಭಿಷೇಕ ನಂತರ 11 ಗಂಟೆಗೆ ಮಹಾಪೂಜೆ ನಡೆದು ಬಲಿ ಹೊರಟು ಪಲ್ಲ ಪೂಜೆ ನಡೆದು ಸರಿಯಾಗಿ 12:30 ಗೆ ಬ್ರಾಹ್ಮಣ ಸುಹಾಸಿನಿ ಆರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿರುವುದು.
ರಾತ್ರಿ 07:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 08-30 ಕ್ಕೆ ವೈಭವದ ಬೈಗಿನ ಬಲಿಯು ನಡೆಯಲಿರುವುದು. ರಾತ್ರಿ 11 ಕ್ಕೆ ರಂಗಪೂಜೆ , ರಾತ್ರಿ 12 ಕ್ಕೆ ವೈಭವದ ಬ್ರಹ್ಮಮಂಡಲ ಸೇವೆ ನಡೆದು ರಾತ್ರಿ 3:30 ಕ್ಕೆ ಶ್ರೀ ಭೂತಬಲಿ ಮೂಲಕ ಒಂದು ದಿನದ ಶೈವೋತ್ಸವವು ಸಮಾಪ್ತಿಯಾಗುತ್ತದೆ.
ಭಕ್ತಾದಿಗಳು , ಆದಿ ಭಜಕರು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಸೇವಾರ್ಥಿಗಳು ಹಾಗೂ ದೇವಸ್ಥಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ