- Advertisement -
- Advertisement -
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ದಕ್ಷ ಅಧಿಕಾರಿಯಾಗಿ ಹಾಗೂ ಜನಸ್ನೇಹಿ ಪಿಎಸ್ಐ ಪವನ್ ನಾಯಕ್ ಅವರನ್ನು ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಕೆಲ ಸಮಯ ಕರ್ತವ್ಯ ನಿರ್ವಹಿಸಿದ್ದರು.
ಬೆಳ್ತಂಗಡಿ ಸಂಚಾರಿ ಠಾಣೆಯ ಪಿಎಸ್ಐ -2 ಭಾರತಿ ಶೆಟ್ಟಿ ಅವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪಿಎಸ್ಐ-2 ಜಾಗಕ್ಕೆ ಮಂಗಳೂರು ಮೆಸ್ಕಾಂ ಪಿಎಸ್ಐ -ಲಕ್ಷ್ಮಣ ಸಿಟಿ ಅವರನ್ನು ನೇಮಕ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ -1 ಗೆ ಯಾರನ್ನು ನೇಮಕ ಮಾಡಲಾಗಿಲ್ಲ. ಇನ್ನೂ ಈ ಆದೇಶವನ್ನು ಪಶ್ಚಿಮ ವಲಯ ಪೊಲೀಸ್ ಮಹಾನೀರಿಕ್ಷಕರು ದೇವಜ್ಯೋತಿ ರೇ -ಐಪಿಎಸ್ ಮಂಗಳೂರು ಹೊರಡಿಸಿದ್ದಾರೆ
- Advertisement -