- Advertisement -
- Advertisement -
ಬೆಂಗಳೂರು: ಚಂದನವನದ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ ನಡೆಸದಂತೆ ರಾಜಕಾರಣಿಯೊಬ್ಬರು ಒತ್ತಡ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಮಂಗಳೂರು ಪೊಲೀಸರ ಮೇಲೆ ಈ ಒತ್ತಡ ತರಲಾಗಿದ್ದು ಸರ್ಕಾರಕ್ಕೂ ಈ ಪ್ರಭಾವಿ ರಾಜಕಾರಣಿ ಭಾರೀ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅನುಶ್ರೀಯವರನ್ನು ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲು ಪೊಲೀಸರು ಯೋಚಿಸುತ್ತಿರುವ ಬೆನ್ನಲ್ಲೇ ಅನುಶ್ರೀ ಅವರನ್ನು ರಕ್ಷಣೆ ಮಾಡಲು ರಾಜಕಾರಣಿಯೊಬ್ಬರ ಪ್ರವೇಶವಾಗಿದೆ. ಹೀಗಾಗಿ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ.
- Advertisement -